Webdunia - Bharat's app for daily news and videos

Install App

ಲಂಕಾ ವಿರುದ್ಧ ತಗಾದೆ ತೆಗೆದು ಗೆದ್ದ ಮೇಲೆ ಬಾಂಗ್ಲಾದೇಶ ಡ್ರೆಸ್ಸಿಂಗ್ ರೂಂ ಗಾಜು ಪುಡಿ ಪುಡಿ ಮಾಡಿದ್ದು ಯಾರು?!

Webdunia
ಭಾನುವಾರ, 18 ಮಾರ್ಚ್ 2018 (09:08 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಅತಿಥೇಯ ಲಂಕಾ ವಿರುದ್ಧ ಗೆಲುವಿಗೆ ಸಮೀಪವಿದ್ದಾಗ ನಡೆದುಕೊಂಡ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬಾಂಗ್ಲಾ ಆಟಗಾರರು ಸೋಲು-ಗೆಲುವಿನ ಸನಿಹವಿದ್ದಾಗ ಲಂಕಾ ಆಟಗಾರರೊಂದಿಗೆ ಜಗಳ ತೆಗೆದು ಪಂದ್ಯ ಬಹಿಷ್ಕರಿಸುವ ಪ್ರಹಸನ ನಡೆಸಿದ್ದರು. ಇಷ್ಟಕ್ಕೇ ಬಾಂಗ್ಲಾ ಆಟಗಾರರ ದುಂಡಾವರ್ತನೆ ಮುಗಿದಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಪಂದ್ಯದ ಮುಗಿದ ಮೇಲೆ ಬಾಂಗ್ಲಾ ಡ್ರೆಸ್ಸಿಂಗ್ ರೂಂನ ಗಾಜು ಪುಡಿ ಪುಡಿಯಾಗಿರುವುದು ಕಂಡುಬಂದಿದೆ. ಈ ತಗಾದೆ ಸಂದರ್ಭದಲ್ಲಿ ಅಥವಾ ಗೆದ್ದ ಮೇಲೆ ಬಾಂಗ್ಲಾ ಆಟಗಾರರು ಈ ಕೃತ್ಯವೆಸಗಿರುವುದು ಸ್ಪಷ್ಟವಾಗಿದೆ.

ಇದೀಗ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಈ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಂಡಾವರ್ತನೆ ತೋರಿದ ಆಟಗಾರರನ್ನು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ದೊಡ್ಡ ಮಟ್ಟಿನ ಶಿಕ್ಷೆಯಾಗುವ ಮೊದಲು ಬಾಂಗ್ಲಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಈ ನಷ್ಟದ ಪರಿಹಾರ ಒದಗಿಸುವುದಾಗಿ ಹೇಳಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

ಮುಂದಿನ ಸುದ್ದಿ
Show comments