Select Your Language

Notifications

webdunia
webdunia
webdunia
webdunia

ಬಾಂಗ್ಲಾದೇಶ ಕ್ರಿಕೆಟಿಗರ ಸ್ಟ್ರೈಕ್! ಟೀಂ ಇಂಡಿಯಾ ಸರಣಿ ಗತಿಯೇನು?

ಬಾಂಗ್ಲಾದೇಶ ಕ್ರಿಕೆಟಿಗರ ಸ್ಟ್ರೈಕ್! ಟೀಂ ಇಂಡಿಯಾ ಸರಣಿ ಗತಿಯೇನು?
ಮುಂಬೈ , ಮಂಗಳವಾರ, 22 ಅಕ್ಟೋಬರ್ 2019 (10:34 IST)
ಮುಂಬೈ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿ ಬಿದ್ದಿರುವ ಬಾಂಗ್ಲಾ ಕ್ರಿಕೆಟಿಗರು ಭಾರತ ಸರಣಿಯಿಂದ ಹಿಂದೆ ಸರಿಯುವ ಸಾಧ‍್ಯತೆಯಿದೆ.


ಮುಂದಿನ ತಿಂಗಳು ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಟಿ20 ಸರಣಿ ಆಡಬೇಕಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಕ್ರಿಕೆಟಿಗರು ಎಲ್ಲಾ ಬಿಟ್ಟು ಪ್ರತಿಭಟನೆಗೆ ಕೂತಿದ್ದಾರೆ. ಹಾಗಾಗಿ ಭಾರತ ಪ್ರವಾಸಕ್ಕೆ ಕ್ರಿಕೆಟಿಗರು ಬಾರದೇ ಪಟ್ಟು ಹಿಡಿಯುವ ಸಾಧ‍್ಯೆಯಿದೆ.

ಇದರಿಂದಾಗಿ ಭಾರತ-ಬಾಂಗ್ಲಾ ಸರಣಿ ಅನುಮಾನದಲ್ಲಿದೆ. ಎ ತಂಡವನ್ನಾದರೂ ಕಳುಹಿಸೋಣವೆಂದರೆ ಸುಮಾರು 50 ಕ್ರಿಕೆಟಿಗರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬಿಸಿಬಿ ಸಂಕಟಕ್ಕೆ ಸಿಲುಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ನಾವು ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ಬಿಸಿಬಿಯಿಂದ ಅಧಿಕೃತ ಹೇಳಿಕೆ ಬರುವವರೆಗೆ ನಾವು ಏನನ್ನೂ ಹೇಳುವಂತಿಲ್ಲ ಎಂದಿದೆ. ನವಂಬರ್ 3 ರಿಂದ ಸರಣಿ ಆರಂಭವಾಗಬೇಕಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಂಚಿ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮಾಡಿದ ದಾಖಲೆಗಳು ಏನೇನು?