Select Your Language

Notifications

webdunia
webdunia
webdunia
webdunia

ಆಸೀಸ್ ಆಟಗಾರರ ಕ್ಷಮೆ ಕೇಳಿದ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು

ಆಸೀಸ್ ಆಟಗಾರರ ಕ್ಷಮೆ ಕೇಳಿದ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು
ಗುವಾಹಟಿ , ಶುಕ್ರವಾರ, 13 ಅಕ್ಟೋಬರ್ 2017 (09:53 IST)
ಗುವಾಹಟಿ: ದ್ವಿತೀಯ ಟಿ20 ಪಂದ್ಯ ಮುಗಿದು ಹೋಟೆಲ್ ಗೆ ಮರಳುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಕೃತ್ಯಕ್ಕೆ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು ಕ್ಷಮೆ ಯಾಚಿಸಿದ್ದಾರೆ.

 
ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿದ ಅಸ್ಸಾಂ ಮುಖ್ಯಮಂತ್ರಿ ಸೋನೇವಾಲ್, ತನಿಖೆಗೆ ವಿಶೇಷ ತಂಡ ರಚಿಸಿದ್ದರು. ಇದರ ನಡುವೆಯೇ ಆಸೀಸ್ ಆಟಗಾರರು ಕಲ್ಲು ತೂರಾಟ ನಡೆಸಿದರೂ ಭಾರತದ ಕ್ರಿಕೆಟ್ ಅಭಿಮಾನಿಗಳೆಂದರೆ ನಮಗಿಷ್ಟ ಎಂದಿದ್ದರು.

ಇದೀಗ ಅಸ್ಸಾಂ ಕ್ರಿಕೆಟ್ ಅಭಿಮಾನಿಗಳ ಗುಂಪೊಂದು ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ಮತ್ತು ಅವರು ತೆರಳುವ ವಿಮಾನ ನಿಲ್ದಾಣದಲ್ಲಿ ಕ್ಷಮೆ ಕೋರುವ ಭಿತ್ತಿ ಪತ್ರಗಳನ್ನು ಹಿಡಿದು ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಈ ಮಾನವೀಯತೆಗೆ ಆಸೀಸ್ ಆಟಗಾರರೂ ಮಾರು ಹೋಗಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಲದೀಪ್ ಯಾದವ್ ಅನಿಲ್ ಕುಂಬ್ಳೆಯ ಕೈಗೂಸು ಎಂದ ಟೀಂ ಇಂಡಿಯಾ ಕ್ರಿಕೆಟಿಗ