ಬೆಂಗಳೂರು: ಕೇರಳದ ಶಬರಿಮಲೆ ಯಾತ್ರೆ ಮಾಡುವ ಭಕ್ತಾದಿಗಳು ಈ ಕೊರೋನಾ ಸಮಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಮೊದಲನೆಯದಾಗಿ ವರ್ಚ್ಯುವಲ್ ಕ್ಯೂ ಬುಕಿಂಗ್ ಮಾಡಬೇಕು. ಕೇಂದ್ರ ಸರ್ಕಾರದ ಅನುಮೋದಿತ ಪ್ರಯೋಗಾಲಯದಿಂದ ಕೊವಿಡ್-19 ಪ್ರಮಾಣ ಪತ್ರ ತರಬೇಕು. ಕೇರಳಕ್ಕೆ ಪ್ರವೇಶಿಸಲು ಇ ಪಾಸ್ ಮಾಡಿಸಿಕೊಳ್ಳಬೇಕು. ಸ್ವಂತ ವಾಹನಗಳಲ್ಲಿ ಪಂಪಾಗೆ ಪ್ರಯಾಣಿಸಲು ಅವಕಾಶ. ಪಂಪಾ ನದಿಯಲ್ಲಿ ಸ್ನಾನಕ್ಕೆ ಅವಕಾಶವಿಲ್ಲ. ರಾತ್ರಿಯಿಡೀ ದೇವಾಲಯದಲ್ಲಿ ಉಳಿದುಕೊಳ್ಳುವಂತಿಲ್ಲ. ಇರುಮುಡಿ ತುಪ್ಪವನ್ನು ಅಭಿಷೇಕ ಮಾಡಲ್ಲ. ದೇವಾಲಯದ ಸುತ್ತಮುತ್ತ ಲಾಡ್ಜಿಂಗ್ ಸೌಲಭ್ಯವಿಲ್ಲ. ವಂಡಿಪೆರಿಯಾರ್-ಪುಲಮೇಡು ಮಾರ್ಗ ಬಂದ್ ಆಗಿರುತ್ತದೆ.