Publish Date: Wed, 20 May 2020 (09:52 IST)
Updated Date: Wed, 20 May 2020 (09:54 IST)
ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಗೆ ಭಾರತೀಯ ಆಯುರ್ವೇಧ ಪದ್ಧತಿ ಔಷಧಿಯಲ್ಲಿ ಬಳಕೆಯಾಗುವ ಅಶ್ವಗಂಧ ಪರಿಣಾಮಕಾರಿ ಎಂದು ದೆಹಲಿ ಐಐಟಿ ಮತ್ತು ಜಪಾನ್ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಶ್ವಗಂಧ ಮತ್ತು ಕೇಪ್ ನಲ್ಲಿರುವ ಸಂಯುಕ್ತ ಕಣಗಳು ಕೊರೋನಾ ವೈರಾಣುವಿನ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.
ಹೀಗಾಗಿ ಭಾರತದ ಅಶ್ವಗಂಧಕ್ಕೆ ಈಗ ಮಹತ್ವ ಬಂದಿದೆ. ಭಾರತದ ಆಯುರ್ವೇದ ಪದ್ಧತಿ ಔಷಧಿಯಲ್ಲಿ ಆಂಟಿ ಬಯೋಟಿಕೆ ರೀತಿ ಕೆಲಸ ಮಾಡುವ ಅಶ್ವಗಂಧದ ಬಗ್ಗೆ ತಜ್ಞರು ಮುಂದೆ ಮತ್ತಷ್ಟು ಸಂಶೋಧನೆ ನಡೆಸಲಿದ್ದಾರೆ.