Webdunia - Bharat's app for daily news and videos

Install App

ನಿರ್ದೇಶಕ ವರಾಹಿ ವಿರುದ್ಧ ಶ್ರೀರೆಡ್ಡಿ ದೂರು ದಾಖಲಿಸಿದ್ದು ಯಾಕೆ?

Webdunia
ಮಂಗಳವಾರ, 31 ಜುಲೈ 2018 (08:01 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಟಾಲಿವುಡ್ ನಲ್ಲಿ ಹೋರಾಟ ನಡೆಸಿದ ನಟಿ ಶ್ರೀರೆಡ್ಡಿ ಅವರು ಇದೀಗ ನಿರ್ದೇಶಕ ವರಾಹಿ ವಿರುದ್ಧ ದೂರು ದಾಖಲಿಸಿದ್ದಾರಂತೆ.


ಹೌದು. ಕಾಸ್ಟಿಂಗ್ ಕೌಚ್ ವಿಚಾರವಾಗಿ ನಟಿ ಶ್ರೀರೆಡ್ಡಿ ಅವರು ಟಾಲಿವುಡ್ ಹಾಗೂ ಕಾಲಿವುಡ್ ನ ಸ್ಟಾರ್ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರ ಮೇಲೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ವರಾಹಿ ಅವರು ,’ಈ ರೀತಿ ಆಕೆ ಮಾಡುತ್ತಿರುವ ಆಧಾರವಿಲ್ಲದ ಆರೋಪಗಳು ನಿಜಕ್ಕೂ ನಾಚಿಕೆಯಾಗುವಂತದ್ದು, ಸಿನಿಮಾ ಅವಕಾಶಗಳಿಗಾಗಿ ತಾನು ನಿರ್ದೆಶಕರು ಹಾಗೂ ನಟರ ಜೊತೆ ಮಂಚಕ್ಕೆ ಏರಿದ್ದೆ ಎಂದು ಆಕೆಯೇ ಹೇಳಿಕೊಳ್ಳುತ್ತಿದ್ದಾಳೆ. ಇದರಿಂದಲೇ ತಿಳಿಯುತ್ತೇ ಆಕೆ ಏನು ಅನ್ನುವುದು. ಅವಳ ಈ ವರ್ತನೆಯಿಂದ ಹೆಣ್ಣು ಮಕ್ಕಳ ಮೇಲಿನ ಗೌರವಕ್ಕೂ ದಕ್ಕೆ ಬರುತ್ತಿದೆ’ ಎಂದು ಹೇಳಿದ್ದರು.


ಅವರ ಈ ಮಾತಿನಿಂದ ಕೋಪಗೊಂಡ ನಟಿ ಶ್ರೀರೆಡ್ಡಿ ನಿರ್ದೇಶಕ ವರಾಹಿ ತನ್ನನ್ನು ವೇಶ್ಯೆ ಎಂದು ಜರಿದಿದ್ದಾರೆ ಎಂದು ಆರೋಪಿಸಿ ನಿರ್ದೇಶಕರ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ್ದಾರಂತೆ. ಹಾಗೇ ಈ ವಿಷಯವನ್ನು ತನ್ನ ಫೇಸ್ ಬುಕ್ ನಲ್ಲಿಯೂ ಬರೆದುಕೊಂಡು, ಮತ್ತೊಮ್ಮೆ ಈ ರೀತಿಯ ಮಾತುಗಳನ್ನಾಡಿದರೆ ಕಪಾಳಕ್ಕೆ ಹೊಡೆಯುವುದಾಗಿ ಎಚ್ಚರಿಕೆ ನೀಡಿದ್ದಾರಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments