Webdunia - Bharat's app for daily news and videos

Install App

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರಲ್ಲಿ ಕ್ಷಮೆ ಕೇಳಿದ್ದಾದರೂ ಯಾಕೆ?

Webdunia
ಮಂಗಳವಾರ, 20 ಮಾರ್ಚ್ 2018 (06:22 IST)
ಮುಂಬೈ : ನಿದಾಸ್ ತ್ರಿಕೋನ ಟಿ20 ಸರಣಿಯಲ್ಲಿ ಬಾಂಗ್ಲಾ ದೇಶದ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನ  ನೀಡಿದ ಹಿನ್ನಲೆಯಲ್ಲಿ ಎಲ್ಲಾ ಸ್ಟಾರ್ ಗಳಂತೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೂಡ ದಿನೇಶ್ ಕಾರ್ತಿಕ್ ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದು, ಆದರೆ ಮತ್ತೊಂದು ಟ್ವೀಟ್ ಮಾಡಿ ಅವರಲ್ಲಿ ಕ್ಷಮೆ ಕೇಳಿದ್ದಾರೆ.


ಅವರು ಈ ರೀತಿ ಮಾಡಲು ಕಾರಣವೆನೆಂದರೆ ಅವರು ಮೊದಲನೇಯ ಟ್ವೀಟ್ ಅನ್ನು ತಪ್ಪಾಗಿ ಟೈಪ್ ಮಾಡಿದ್ದರು. ಅಂದರೆ ಅವರು ಮೊದಲಬಾರಿ ಎರಡು ಓವರ್ ಗಳಲ್ಲಿ 24 ರನ್ ಗಳಿಸಬೇಕಿತ್ತು. ದಿನೇಶ್ ಕಾರ್ತಿಕ್ ಬ್ರಿಲಿಯಂಟ್ ನಾಕ್. ಒಂದು ಎಸೆತದಲ್ಲಿ 5 ರನ್ ಗಳಿಸಬೇಕಾದ ವೇಳೆ ಸಿಕ್ಸ್ ಸಿಡಿಸಿದ್ದಾರೆ. ನಿಮಗೇ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಆದರೆ ಅವರು ಈ ಟ್ವೀಟ್ ನಲ್ಲಿ 34 ರನ್ ಬದಲಾಗಿ 24 ರನ್ ಎಂದು ಬರೆದಿದ್ದರು. ನಂತರ ತಾವು ಮಾಡಿರುವ ತಪ್ಪನ್ನು ತಿಳಿದು ಇನ್ನೊಂದು ಟ್ವೀಟ್ ಮೂಲಕ `ದಿನೇಶ್ ಕಾರ್ತಿಕ್ ಸಾರಿ’ ಎಂದು ಬರೆದಿದ್ದಾರೆ. ತಾವು ಮಾಡಿದ ಚಿಕ್ಕ ತಪ್ಪಿಗೆ ಕ್ಷಮೆ ಯಾಚಿಸಿದ ಅಮಿತಾಬ್ ಅವರ ಈ ಗುಣಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಸಲ್ಮಾನ್ ಖಾನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments