ತಮ್ಮ ಪತಿ ಅನಂದ್ ಅಹುಜಾ ಹೆಸರನ್ನು ಬದಲಾಯಿಸಿಕೊಂಡಿರುವುದರ ಬಗ್ಗೆ ಸೋನಂ ಕಪೂರ್ ಪ್ರತಿಕ್ರಿಯೆ ಏನು?

Webdunia
ಗುರುವಾರ, 24 ಮೇ 2018 (06:06 IST)
ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅನಂದ್ ಅಹುಜಾ  ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದು, ಮದುವೆಯಾದ ಬಳಿಕ ಪತಿ ಅನಂದ್ ಅಹುಜಾ ತನ್ನ ಹೆಸರಿನ ನಡುವೆ ಒಂದು ಎಸ್ ಸೇರಿಸಿಕೊಂಡು ಆನಂದ್ ಎಸ್ ಅಹುಜಾ ಎಂದು, ಹೆಸರನ್ನು ಬದಲಾಯಿಸಿಕೊಂಡು  ಸುದ್ದಿಯಾಗಿದ್ದರು. ಈ ಬಗ್ಗೆ ಇದೀಗ ಪತ್ನಿ ಸೋನಂ ಕಪೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.


ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಸೋನಂ ಕಪೂರ್ ಅವರಿಗೆ , ಮಾಧ್ಯಮಗಳು ಆನಂದ್ ಅಹುಜಾ ತನ್ನ ಹೆಸರು ಬದಲಾವಣೆ ಮಾಡಿದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಸೋನಂ ಕಪೂರ್ ಅವರು,’ ನಿಜವಾಗಿಯೂ ಅನಂದ್ ಹೆಸರು ಬದಲಿಸಿದ ಬಗ್ಗೆ ನನಗೆ ನನ್ನ ಮ್ಯಾನೆಜರ್ ಹೇಳಿ ಗೊತ್ತು. ನಾನು ನಿಂತರೂ ಸುದ್ದಿಯಾಗುತ್ತೇನೆ. ಕೂತರೂ ಸುದ್ದಿಯಾಗುತ್ತೇನೆ. ನನ್ನ ಬಗ್ಗೆ ಜನ ಇಷ್ಟೊಂದು ಕುತೂಹಲಭರಿತರಾಗಿದ್ದಾರೆ ಎಂದರೆ ನಿಜಕ್ಕೂ ಸಂತೋಷವಾಗುತ್ತಿದೆ. ನಾನು ಮಾಡುವ ಪ್ರತಿಯೊಂದು ವಿಚಾರವೂ ಸುದ್ದಿಗೆ ಗ್ರಾಸವಾಗುತ್ತದೆ ಎಂದರೆ ಅದು ನನಗೆ ಖುಷಿಕೊಡುವ ವಿಚಾರ’ ಎಂದಿದ್ದಾರೆ.


‘ಆದರೆ ನನ್ನ ಪಾಪದ ಗಂಡನ ಬಗ್ಗೆ ದಯವಿಟ್ಟು ಸುದ್ದಿ ಮಾಡಬೇಡಿ. ನನ್ನ ಪತಿ ಹೆಸರು ಬದಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ.ಅನಂದ್ ಅಹುಜಾ ನಿಜಕ್ಕೂ ವಿಶೇಷ ವ್ಯಕ್ತಿ. ಅದೇ ಕಾರಣಕ್ಕೆ ನಾನು ಅವರನ್ನು ಮದುವೆಯಾಗಿದ್ದೇನೆ. ಆತನನ್ನು ಪತಿಯಾಗಿ ಪಡೆಯಲು ನಾನು ನಿಜಕ್ಕೂ ಪುಣ್ಯ ಮಾಡಿದ್ದೇನೆ .ಇದೊಂದು ಬದಲಾವಣೆಯ ಸೂಚನೆ. ಅವರ ಇಷ್ಟದಂತೆ ಅವರು ಮಾಡಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಶಿರಡಿ ಸಾಯಿಬಾಬಾಗೆ ಕೊಡುಗೆ ನೀಡಿ, ಕಾರಣ ಬಿಚ್ಚಿಟ್ಟ ಕನಸಿನ ರಾಣಿ ಮಾಲಾಶ್ರೀ

ದರ್ಶನ್ ಜೈಲಿನಲ್ಲಿ ಹಲ್ಲೆ ಮಾಡಿದ್ದು ನಿಜಾನಾ: ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು

ಮುಂದಿನ ಸುದ್ದಿ
Show comments