Select Your Language

Notifications

webdunia
webdunia
webdunia
webdunia

ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್

ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್
ಮುಂಬೈ , ಶನಿವಾರ, 14 ಅಕ್ಟೋಬರ್ 2017 (15:34 IST)
ಮುಂಬೈ: ಚಿತ್ರರಂಗದ ನಟ ನಟಿಯರು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್. ಇದೀಗ ಪಟಾಕಿ ಬಳಸಬೇಡಿ ಎಂದು ಹೇಳುವ ಮೂಲಕ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಾಯುಮಾಲಿನ್ಯ ತಡೆಯುವ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ಈ ಬಾರಿ ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ನಿಷೇಧಿಸಿತ್ತು. ಹೀಗಾಗಿ ಪ್ರೇರೇಪಿತರಾದ ಶ್ರದ್ಧಾ ಅಭಿಮಾನಿಗಳಿಗೆ ಪಟಾಕಿಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ.

ತಮ್ಮ ಟ್ವಿಟರ್‌ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿರುವ ಶ್ರದ್ಧಾ, ತನ್ನ ಮುದ್ದಿನ ನಾಯಿಯೊಂದಿಗೆ ಕುಳಿತಿರುವ ಶ್ರದ್ಧಾ, ಪಟಾಕಿ ಸಿಡಿಸುವುದರಿಂದ ಪ್ರಾಣಿಗಳಿಗೂ ಹಾನಿಯಾಗುತ್ತದೆ. ಹೀಗಾಗಿ ಪಟಾಕಿ ಬಳಸಬೇಡಿ ಎಂದು ಹೇಳಿದ್ದಾರೆ.

ಶ್ರದ್ಧಾ ಈ ಪೋಸ್ಟ್ ಹಾಕುತ್ತಿದ್ದಂತೆ ಗರಂ ಆಗಿರುವ ಅಭಿಮಾನಿಗಳು, ನೀವು ಕಾರಿನಲ್ಲಿ ಬಳಸುವ ಎಸಿಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲವೇ. ಮಾಂಸಾಹಾರ ಸೇವಿಸುವಾಗ ಪ್ರಾಣಿಗಳ ನೆನಪು ಆಗುವುದಿಲ್ಲವಾ ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲಿಂದ್ ಸೋಮನ್ ಗೆ ಅಭಿಮಾನಿಗಳು ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?