Select Your Language

Notifications

webdunia
webdunia
webdunia
webdunia

ಪದ್ಮಾವತ್ ಚಿತ್ರದ ಅಲ್ಲಾವುದ್ಧೀನ್ ಖಿಲ್ಜಿ ಪಾತ್ರಕ್ಕೆ ರಣವೀರ್ ಸಿಂಗ್ ರವರಿಗೆ ಈ ಪ್ರಶಸ್ತಿ ಲಭಿಸಲಿದೆಯಂತೆ !

ಪದ್ಮಾವತ್ ಚಿತ್ರದ ಅಲ್ಲಾವುದ್ಧೀನ್ ಖಿಲ್ಜಿ ಪಾತ್ರಕ್ಕೆ ರಣವೀರ್ ಸಿಂಗ್ ರವರಿಗೆ ಈ ಪ್ರಶಸ್ತಿ ಲಭಿಸಲಿದೆಯಂತೆ !
ಮುಂಬೈ , ಬುಧವಾರ, 11 ಏಪ್ರಿಲ್ 2018 (07:33 IST)
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಚಿತ್ರ ನಿರ್ಮಾಣದಲ್ಲಿ ಅವರ ಸಾಧನೆಯನ್ನು ಗುರುತಿಸಿ ‘ದಾದಾ ಸಾಹೇಬ್ ಪಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಅದೇರೀತಿ ಇದೀಗ ಬಾಲಿವುಡ್ ನ ಇನ್ನೊಬ್ಬ ನಟ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


ಹೌದು. ‘ಪದ್ಮಾವತ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರ  ಅಲ್ಲಾವುದ್ಧೀನ್ ಖಿಲ್ಜಿ  ಪಾತ್ರಕ್ಕೆ  ಇದೀಗ ದಾದಾ ಸಾಹೇಬ್ ಪಾಲ್ಕೆ’ ಪ್ರಶಸ್ತಿ ಒಲಿದುಬಂದಿದೆ. ‘ಪದ್ಮಾವತ್’ ಸಿನಿಮಾದಲ್ಲಿ  ಅಲ್ಲಾವುದ್ಧೀನ್ ಖಿಲ್ಜಿ ಯಾಗಿ ನಟಿಸಿದ ನಟ ರಣವೀರ್ ಸಿಂಗ್ ಅವರ ಅಭಿನಯ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಹಾಗೇ ಅವರ ಈ ಅಮೋಘವಾದ ನಟನೆಯನ್ನು ಕಂಡು ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮಿತಿ ರಣ್ ವೀರ್ ಸಿಂಗ್ ಅವರಿಗೆ ಪತ್ರ ಬರೆಯುವುದರ ಮೂಲಕ ‘ಪದ್ಮಾವತ್ ಚಿತ್ರದಲ್ಲಿ ನಿಮ್ಮ ಅವಿಸ್ಮರಣಿಯ ಅಭಿನಯಕ್ಕಾಗಿ ನಿಮ್ಮನ್ನು ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಎಕ್ಸಲೆನ್ಸ್ ಅವಾರ್ಡ್ 2018 ಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶ್ರೀಕಾಂತ್ ಬಗ್ಗೆ ನಟಿ ಶ್ರೀರೆಡ್ಡಿ ಹೇಳಿದ್ದಾದರೂ ಏನು…?