Select Your Language

Notifications

webdunia
webdunia
webdunia
webdunia

ಜಯಲಲಿತಾ ಆತ್ಮ ಸಮಾಧಿಯಿಂದ ಎದ್ದು ಬರುವುದೇ ಕ್ಲೈಮ್ಯಾಕ್ಸ್!

ಜಯಲಲಿತಾ ಆತ್ಮ ಸಮಾಧಿಯಿಂದ ಎದ್ದು ಬರುವುದೇ ಕ್ಲೈಮ್ಯಾಕ್ಸ್!
Chennai , ಮಂಗಳವಾರ, 21 ಫೆಬ್ರವರಿ 2017 (08:29 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆತ್ಮ ಸಮಾಧಿಯಿಂದ ಎದ್ದು ಬರುವುದೇ ನನ್ನ ಚಿತ್ರದ ಕ್ಲೈಮ್ಯಾಕ್ಸ್ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಬಗ್ಗೆ ವರ್ಮಾ ತನ್ನದೇ ಶೈಲಿಯಲ್ಲಿ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
 
ಜಯಲಲಿತಾ ಆಪ್ತ ಗೆಳತಿ ಶಶಿಕಲಾ ಬಗ್ಗೆ ಹಲವಾರು ವಿಷಯಗಳನ್ನು ಸಂಗ್ರಹಿಸಿದ್ದೇನೆಂದು. ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತನ್ನ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದಿದ್ದಾರೆ.  ಅಕ್ರಮ ಆಸ್ತಿ ವಿಚಾರವಾಗಿ ಸುಪ್ರೀಂ ಕೋರ್ಟು ತೀರ್ಪಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಶಿಕ್ಷೆ ಅನುಭವಿಸುತ್ತಿದ್ದಾರೆ. 
 
ಅಲ್ಲಿನ ಜೈಲು ಅಧಿಕಾರಿಗಳ ಜತೆಗೆ ಶಶಿಕಲಾ ಮಾತನಾಡುತ್ತಾ, ತಾನು ಸಣ್ಣಪುಟ್ಟ ಕಳ್ಳತನ ಮಾಡಿರುವವಳಲ್ಲ ಎಂದಿರುವ ಬಗ್ಗೆ ಸುದ್ದಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮು, ಯಾವುದು ಅಪರಾಧ? ಬದುಕಲು ರೂ.600 ಲಪಟಾಯಿಸುವ ಕಳ್ಳನದೇ? ಅಥವಾ ನಂಬಿದ ಜನರನ್ನು ಮೋಸ ಮಾಡಿ ವಿಲಾಸಿ ಜೀವನ ನಡೆಸಲು 60 ಕೋಟಿ ಲಪಟಾಯಿಸುವ ಕಳ್ಳನದೇ? ಎಂದು ಪ್ರಶ್ನಿಸಿದ್ದಾರೆ. 
 
ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ನೋಡಿದರೆ ಸಮಾಧಿಯಲ್ಲಿರುವ ಜಯಲಲಿತಾ ಆತ್ಮಕ್ಕೆ ಶಾಂತಿ ಸಿಗುತ್ತಾ? ಜಯಲಲಿತಾ ಆತ್ಮ ಸಮಾಧಿಯಿಂದ ಎದ್ದುಬರುವುದೇ ಒಳ್ಳೆಯ ಕ್ಲೈಮ್ಯಾಕ್ಸ್ ಎಂದು ವರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಬಗ್ಗೆ ಮೌನ ಮುರಿದ ಕಂಗನಾ ರನೌತ್