Select Your Language

Notifications

webdunia
webdunia
webdunia
webdunia

ಅಶ್ಲೀಲ ಹೇಳಿಕೆ ವಿವಾದ: ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾಗೆ ಸಮನ್ಸ್ ಜಾರಿ

Maharashtra Cyber Cell ,  'India's Got Latent, Obscene statement controversy,

Sampriya

ಮುಂಬೈ , ಸೋಮವಾರ, 17 ಫೆಬ್ರವರಿ 2025 (18:10 IST)
Photo Courtesy X
ಮುಂಬೈ: ಇಂಡಿಯಾಸ್ ಗಾಟ್ ಲ್ಯಾಲೆಂಟ್ ಶೋನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಸಂಬಂಧ  ಫೆಬ್ರವರಿ 24 ರಂದು ಮಹಾರಾಷ್ಟ್ರ ಸೈಬರ್ ಸೆಲ್  ಮುಂದೆ ಹಾಜರಾಗುವಂತೆ  ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ ಸಮನ್ಸ್ ನೀಡಿದೆ.

'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ಸಂಬಂಧ ರಣವೀರ್ ಅಲ್ಲಾಬಾಡಿಯಾ ಮತ್ತು ಇತರರ ವಿರುದ್ಧ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ.

ಹಾಸ್ಯನಟ ಸಮಯ್ ರೈನಾ ಅವರಿಗೂ ನಾಳೆ ಸೈಬರ್ ಸೆಲ್ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಅಲ್ಲಾಬಾಡಿಯಾ, ರೈನಾ ಮತ್ತು ಕಾರ್ಯಕ್ರಮದ ಇತರ ಭಾಗವಹಿಸುವವರ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ.

ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕೂಡ ಈ ಬಗ್ಗೆ ತನಿಖೆ ನಡೆಸಿದೆ ಮತ್ತು ಅಲ್ಲಾಬಾಡಿಯಾ, ರೈನಾ ಮತ್ತು ಇತರರಿಗೆ ಸಮನ್ಸ್ ಜಾರಿ ಮಾಡಿದೆ.

ಆದಾಗ್ಯೂ, ಅವರ ವೈಯಕ್ತಿಕ ಸುರಕ್ಷತೆ, ಪೂರ್ವ ವಿದೇಶಿ ಪ್ರಯಾಣದ ಬದ್ಧತೆಗಳು ಮತ್ತು ಇತರ ಲಾಜಿಸ್ಟಿಕಲ್ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಸಮನ್ಸ್ ಪಡೆದವರಲ್ಲಿ ಹಲವರು ಇಂದು ಆಯೋಗದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ.

ತನಗೆ ಜೀವ ಬೆದರಿಕೆ ಇದೆ ಎಂದು ರಣವೀರ್ ಅಲ್ಲಾಬಾಡಿಯಾ ತಿಳಿಸಿದ್ದಾರೆ ಮತ್ತು ಮೂರು ವಾರಗಳ ನಂತರ ಹೊಸ ವಿಚಾರಣೆಯ ದಿನಾಂಕವನ್ನು ಕೋರಿದ್ದಾರೆ ಎಂದು ಆಯೋಗ ಹೇಳಿದೆ. ಆಯೋಗವು ಅವರ ಮನವಿಯನ್ನು ಸ್ವೀಕರಿಸಿದೆ ಮತ್ತು ವಿಚಾರಣೆಯನ್ನು ಮಾರ್ಚ್ 6 ಕ್ಕೆ ಮುಂದೂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಖರ್ಚು ಮಾಡಿ ಮದುವೆಯಾದ ವಿಶ್ವದ ಮೊದಲ ಬಡವ ಧನಂಜಯ್: ಟ್ರೋಲ್‌