Select Your Language

Notifications

webdunia
webdunia
webdunia
webdunia

ಹೆಬ್ಬುಲಿಗೆ ತಟ್ಟಿದ ಕಾಶ್ಮೀರದ ಗಲಭೆಯ ಬಿಸಿ

ಹೆಬ್ಬುಲಿಗೆ ತಟ್ಟಿದ ಕಾಶ್ಮೀರದ ಗಲಭೆಯ ಬಿಸಿ
ಬೆಂಗಳೂರು , ಮಂಗಳವಾರ, 19 ಜುಲೈ 2016 (11:56 IST)
ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಿನಿಮಾ ತಂಡ ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿತ್ತ್ತು. ಈ ವೇಳೆ ಸುದೀಪ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅವರು ಕೆಲ ದಿನ ರೆಸ್ಟ್ ನಲ್ಲಿದ್ದರು. ಹಾಗಾಗಿ ಶೂಟಿಂಗ್ ನಿಂತು ಹೋಗಿತ್ತು. ಇದೀಗ ಶೂಟಿಂಗ್ ಮತ್ತೆ ಆರಂಭ ಮಾಡಿದ್ರು ಸಿನಿಮಾ ತಂಡಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.
ಹೆಬ್ಬುಲಿ ಸಿನಿಮಾದಲ್ಲಿ ಸುದೀಪ್ ಅವರು ಇದೇ ಮೊದಲ ಬಾರಿಗೆ ಆರ್ಮಿ ಆಫೀಸರ್ ಆಗಿ ಅಭಿನಯಿಸುತ್ತಿದ್ದಾರೆ.ಹಾಗಾಗಿ ಸಿನಿಮಾ ತಂಡ ಸಿನಿಮಾದ ಶೂಟಿಂಗ್ ನ್ನು ಜಮ್ಮು ಕಾಶ್ಮೀರದ ಆರ್ಮಿ ಕ್ಯಾಪ ಗಳಲ್ಲಿ ಹಾಗೇ ಭಾರತದ ಗಡಿಯಲ್ಲಿ ಶೂಟ್ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿತ್ತು.ಆದ್ರೆ ಇದೀಗ ಆಗ ಪ್ಲಾನ್ ಉಲ್ಟಾ ಆಗಿದೆ.

ಸದ್ಯ ಕಾಶ್ಮೀರದಲ್ಲಿ ಗಲಭೆ ಉಂಟಾಗಿರೋದರಿಂದ ಸಿನಿಮಾ ತಂಡಕ್ಕೆ ಅಲ್ಲಿಗೆ ತೆರಳೋದಕ್ಕೆ ಸಾಧ್ಯವಾಗುತ್ತಿಲ್ಲ.ಈಗಾಗಲೇ ಎರಡು ಬಾರಿ ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ಪ್ಲಾನ್ ನನ್ನು ಎರಡು ಬಾರಿ ಕ್ಯಾನ್ಸಲ್ ಮಾಡಲಾಗಿದೆಯಂತೆ. ಇದೀಗ ಮತ್ತೆ ಕ್ಯಾನ್ಸಲ್ ಆಗಿರೋದು ಸಿನಿಮಾ ತಂಡಕ್ಕೆ ಬೇಸರ ತಂದಿದೆ.
 
ಅಂದ್ಹಾಗೆ ಇದೀಗ ಸಿನಿಮಾ ತಂಡ ಸಪ್ಟಂಬರ್ ನಲ್ಲಿ ಅಲ್ಲಿ ಚಿತ್ರೀಕರಣ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿದೆಯಂತೆ. ಅಷ್ಟರಲ್ಲಿ ಸಿನಿಮಾದ ಇತರೆ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಇನ್ನು ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗಿರೋದರಿಂದ ಸಿನಿಮಾದ ರಿಲೀಸ್ ಡೇಟ್ ನಲ್ಲೂ ಒಂದಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ರ್ಯಾಂಕ್ ರಾಜುವಿನ ಹೊಸ ಅವತಾರ