Select Your Language

Notifications

webdunia
webdunia
webdunia
webdunia

ಛೋಟಾ ಶಕೀಲ್‌ನಿಂದ ನಿರ್ದೆಶಕರಿಗೆ ಬೆದರಿಕೆ ಕರೆ

ಛೋಟಾ ಶಕೀಲ್‌ನಿಂದ ನಿರ್ದೆಶಕರಿಗೆ ಬೆದರಿಕೆ ಕರೆ
Mumbai , ಬುಧವಾರ, 4 ಜನವರಿ 2017 (14:20 IST)
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್‌ನಿಂದ ಬಾಲಿವುಡ್ ನಿರ್ದೇಶಕ, ನಿರ್ಮಾಪಕರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಬರಹಗಾರ ಮತ್ತು ನಿರ್ದೇಶಕ ವಿಶಾಲ್ ಮಿಶ್ರಾ, ನಿರ್ಮಾಪಕ ವಿನೋದ್ ರಮಣಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ.
 
ಛೋಟಾ ಶಕೀಲ್ ಕಚೇರಿಯಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ದೆಹಲಿ ಡಿಸಿಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ತಾವು ತೆಗೆದಿರುವ ಸಿನಿಮಾಗಳಿಂದ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಬೇಕೆಂದು, ಹಾಗೆಯೇ ಬಿಡುಗಡೆ ’ಖಬಡ್ಡಾರ್’ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 
ಇಷ್ಟಕ್ಕೂ ಇವರು ತೆಗೆದಿರುವ ಸಿನಿಮಾ ಹೆಸರು ’ಕಾಫಿ ವಿತ್ ಡಿ’. ಈ ಚಿತ್ರದಲ್ಲಿ ದಾವೂದ್ ಇಬ್ರಾಹಿಂ ಮೇಲೆ ಕೆಲವು ಜೋಕ್‍ಗಳಿದ್ದು, ಜೊತೆಗೆ ದಾವೂದ್ ನನ್ನು ಕೆಟ್ಟದಾಗಿ ತೋರಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಬೆದರಿಕೆ ಕರೆಗಳು ಬಂದಿವೆ. ಮೊದಲು ದೆಹಲಿ ಆಬಳಿಕ ದುಬೈನಿಂದ ಬೆದರಿಕೆ ಕರೆಗಳು ಬಂದಿವೆ ಎಂದಿದ್ದಾರೆ. ಚಿತ್ರದಲ್ಲಿ ದಾವೂದ್ ಇಬ್ರಾಹಿಂನನ್ನು ಸಂದರ್ಶಿಸುವ ಸನ್ನಿವೇಶಗಳೂ ಇವೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಮೆರಾ ಕಣ್ಣಿಗೆ ಮತ್ತೆ ಸಿಕ್ಕಿಬಿದ್ದ ಜೋಡಿ ಹಕ್ಕಿಗಳು