Webdunia - Bharat's app for daily news and videos

Install App

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?

Webdunia
ಶನಿವಾರ, 7 ಜುಲೈ 2018 (12:31 IST)
ಮುಂಬೈ : ಬಾಲಿವುಡ್ ನ ದುರಂತ ನಾಯಕ ಸಂಜಯ್ ದತ್ ಅವರ  ಜೀವನಾಧಾರಿತ ‘ಸಂಜು’ ಚಿತ್ರ ಈಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.  ಈ ನಡುವೆ ಇದೀಗ ಮಾಜಿ ಪೊಲೀಸ್ ಆಯುಕ್ತ, ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಅವರು ಈ ಸಿನಿಮಾವನ್ನ ಹಾಗೂ ಸಂಜಯ್ ದತ್ ಅವರನ್ನ ವೈಭವೀಕರಿಸಬೇಡಿ ಎಂದು ತಿಳಿಸಿದ್ದಾರೆ.


ಈ ಸಿನಿಮಾ ದಲ್ಲಿ ನಿರ್ದೇಶಕರು  ನಟ ಸಂಜಯ್ ದತ್ ಅವರ ಜೀವನವನ್ನ ಯಥಾವತ್ತಾಗಿ ತೆರೆ ಮೇಲೆ ತಂದಿದ್ದಾರೆ. ಅದರಲ್ಲಿ ಜೈಲು ವಾಸ, ವೆಪನ್, ಹೀಗೆ ಎಲ್ಲವನ್ನ ತೋರಿಸಲಾಗಿದೆ. 1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಅವರ ಬಂಧನವಾಗಿತ್ತು. ಹಾಗೇ ಸಂಜಯ್ ದತ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಎಕೆ-56 ರೈಫಲ್ ಹೊಂದಿದ್ದ ಅಪರಾಧ ಕೂಡ ಸಾಬೀತಾಗಿತ್ತು.

ಇದೇ ಪ್ರಕರಣದಲ್ಲಿ ಸಂಜಯ್ ದತ್ ಅವರಿಗೆ ಗೆ ಶಿಕ್ಷೆ ಕೂಡ ಆಗಿತ್ತು. ನಂತರ ಸಂಜಯ್ ದತ್ 2016 ರಲ್ಲಿ ಬಿಡುಗಡೆಯಾಗಿದ್ದರು. ಆದ್ರೆ ಇದನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಇದನ್ನ ವೈಭವಿಕರಣ ಮಾಡಲಾಗಿದೆ ಎಂದು  ಕೇಂದ್ರ ಸಚಿವರು ಹೇಳಿದ್ದಾರೆ.
ಸಿನಿಮಾಗಳಲ್ಲಿ ವೈಭವೀಕರಣ ಹೆಚ್ಚಾಗುತ್ತಿದ್ದು, ಅದನ್ನ ಕಡಿಮೆಮಾಡಬೇಕು. ಅಪರಾಧಿಯಾದವರು ಯಾರೇ ಇದ್ರು ಅದನ್ನ ವೈಭವೀಕರಿಸಬಾರದು. ಇನ್ನು ಅವರಿಷ್ಟದಂತೆ ಸಿನಿಮಾ ಮಾಡಬಹುದು ಹಾಗಂತ ವೈಭವೀಕರಿಸಬಾರದು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments