Select Your Language

Notifications

webdunia
webdunia
webdunia
webdunia

ಶಿವಕುಮಾರ್ ಸ್ವಾಮೀಜಿಗಳಿಂದ 'ದೊಡ್ಮನೆ ಹುಡುಗ' ಆಡಿಯೋ ರಿಲೀಸ್

ಶಿವಕುಮಾರ್ ಸ್ವಾಮೀಜಿಗಳಿಂದ 'ದೊಡ್ಮನೆ ಹುಡುಗ' ಆಡಿಯೋ ರಿಲೀಸ್
ಬೆಂಗಳೂರು , ಮಂಗಳವಾರ, 16 ಆಗಸ್ಟ್ 2016 (09:43 IST)
ಪವರ್ ಸ್ಟಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಆಡಿಯೋ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬಿಡುಗಡೆ ಮಾಡಲಾಯ್ತು. ಕರ್ನಾಟಕ ರತ್ನ, ತ್ರಿವಿಧ ದಾಸೋಯಿ ಶ್ರೀ ಶಿವಕುಮಾರ್ ಸ್ವಾಮೀಜಿ ಆಗಮಿಸುತ್ತಿದ್ದಂತೆ ಸಾಮೂಹಿಕವಾಗಿ ಪಾದಪೂಜೆ ನೆರವೇರಿತು. ಬಳಿಕ ಶ್ರೀಗಳ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. 


ಮಠದ ಆವರಣದಲ್ಲಿರುವ ಸಿದ್ಧಲಿಂಗೇಶ್ವರ ವೇದ-ಸಂಸ್ಕೃತ ಮಹಾ ಪಾಠಶಾಲೆಯ ಮುಂಭಾಗದಲ್ಲಿ ಹಾಕಿದ್ದ ಸರಳ ವೇದಿಕೆಯಲ್ಲಿ ಸಿದ್ಧಗಂಗಾ ಶ್ರೀಗಳು ಆಡಿಯೋವನ್ನು ರಿಲೀಸ್ ಮಾಡಿದರು.

ಈ ವೇಳೆ ಮಾತನಾಡಿದ ಪುನೀತ್, ಇದು ನಡೆದಾಡುವ ದೇವರಿರುವ ಮಠ.. ನಾನು 6 ವರ್ಷದ ಚಿಕ್ಕವನಿರುವಾಗ ನಮ್ಮ ತಂದೆ ಮಠಕ್ಕೆ ಕರೆತಂದಿದ್ದರು ಹಾಗೂ ಆಶೀವಾರ್ದ ಮಾಡಿಸಿದ್ದರು. ಅಂದಿನಿಂದಲೂ ಮಠದ ಮೇಲೆ ಅಪಾರ ಭಕ್ತಿ ಇದೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ. 
 
ಮಠದ ದಾಸೋಹಕ್ಕಾಗಿ ಪುನೀತ್ ರಾಜಕುಮಾರ್ 2 ಲಕ್ಷ ಹಾಗೂ ದೊಡ್ಮನೆ ಹುಡುಗ ನಿರ್ಮಾಪಕ ಗೋವಿಂದರಾಜು ಮಠದ ದಾಸೋಹಕ್ಕೆ 5 ಲಕ್ಷ ನೀಡಿದರು. ಮೃತ ಯೋಧರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.ಇದೇ ವೇಳೆ ಮೃತ ಡಿ.ಕೆ ರವಿ ತಾಯಿ ಗೌರಮ್ಮ ಅವರನ್ನು ಗೌರವಿಸಲಾಯಿತು.
 
ಆಡಿಯೋ ಬಿಡುಗಡೆ ಸಮಾರಂಭದಲ್ಲಿ  ಹಿರಿಯ ನಟ ಅಂಬರೀಷ್, ನಟಿ ಭಾರತಿ ವಿಷ್ಣುವರ್ಧನ ಅವರನ್ನು ಗೌರವಿಸಲಾಯ್ತು. ನಟ ರವಿಶಂಕರ್, ನಟಿ ಭಾರತಿ ವಿಷ್ಣುವರ್ಧನ, ನಿರ್ದೇಶಕ ಯೋಗರಾಜ್ ಭಟ್, ದೊಡ್ಮನೆ ಚಿತ್ರದ ನಿರ್ದೇಶಕ ಸೂರಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ದೇಶಕಾಯೋ ಸೈನಿಕನಿಗೆ ಭಾವುಕರಾಗಿ ರಮೇಶ್ ಅರವಿಂದ್ ನೀಡಿದ ಗಿಫ್ಟ್ ಏನು?