Select Your Language

Notifications

webdunia
webdunia
webdunia
Saturday, 5 April 2025
webdunia

ಅಮೀರ್ ಬಳಿಕ ಅಕ್ಷಯ್ ಕುಮಾರ್ ಸಿನಿಮಾಗೂ ಬಹಿಷ್ಕಾರದ ಭೀತಿ

ಅಕ್ಷಯ್ ಕುಮಾರ್
ಮುಂಬೈ , ಗುರುವಾರ, 4 ಆಗಸ್ಟ್ 2022 (09:00 IST)
ಮುಂಬೈ: ಯಾಕೋ ಬಾಲಿವುಡ್ ಮಂದಿ ಅದೃಷ್ಟವೇ ಸರಿಯಿಲ್ಲ ಎನ್ನಬಹುದು. ಲಾಲ್ ಸಿಂಗ್ ಛಡ್ಡಾ ಬಿಡುಗಡೆ ಹೊಸ್ತಿಲಲ್ಲಿ ನೆಟ್ಟಿಗರು ಸಿನಿಮಾ ಬಹಿಷ್ಕರಿಸಲು ಕರೆಕೊಟ್ಟು ನಟ ಅಮೀರ್ ಖಾನ್ ಗೆ ತಲೆನೋವು ತಂದಿತ್ತಿದ್ದಾರೆ.

ಇದೀಗ ಅಕ್ಷಯ್ ಕುಮಾರ್ ಕೂಡಾ ಇದೇ ಬಿಸಿಯಲ್ಲಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಎಂಬ ಸಿನಿಮಾ ಬಿಡುಗಡೆಯಾಗಲಿದ್ದು, ಈ ಸಿನಿಮಾಗೂ ನೆಟ್ಟಿಗರು ಬಹಿಷ್ಕಾರದ ಟ್ರೆಂಡ್ ಆರಂಭಿಸಿದ್ದಾರೆ.

ರಕ್ಷಾ ಬಂಧನ್ ಸಿನಿಮಾದ ಕತೆಗಾರ್ತಿ ಕನ್ನಿಕಾ ಧಿಲ್ಲೋನ್ ಈ ಹಿಂದೆ ಹಿಂದೂಗಳ ಭಾವನೆಗೆ ಧಕ್ಕೆ ಬರುವಂತಹ ಟ್ವೀಟ್ ಮಾಡಿದ್ದರು. ಇದನ್ನು ಉಲ್ಲೇಖಿಸಿ ಇದೀಗ ನೆಟ್ಟಿಗರು ಅವರ ಸಿನಿಮಾಗೆ ಬಹಿಷ್ಕಾರ ಹಾಕುವುದಾಗಿ ಅಭಿಯಾನ ಆರಂಭಿಸಿದ್ದಾರೆ. ಇದೀಗ ಸಿನಿಮಾ ತಂಡದ ಚಿಂತೆಗೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಮಾರ್ಟಿನ್ ರಿಲೀಸ್ ದಿನಾಂಕ ಮುಂದೂಡಿಕೆ