Select Your Language

Notifications

webdunia
webdunia
webdunia
webdunia

ನಿರ್ದೇಶಕನ ನೆರವಿಗೆ ಬಂದ ಅಕ್ಷಯ್ ಕುಮಾರ್

ನಿರ್ದೇಶಕನ ನೆರವಿಗೆ ಬಂದ ಅಕ್ಷಯ್ ಕುಮಾರ್
Mumbai , ಶುಕ್ರವಾರ, 21 ಅಕ್ಟೋಬರ್ 2016 (10:08 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್  ಅಕ್ಷಯ್ ಕುಮಾರ್ ಎಂದರೆ ಹಾಗೇನೇ. ಕಷ್ಟದಲ್ಲಿದ್ದವರಿಗೆ ನೆರವು ನೀಡುವುದರಲ್ಲಿ ಎತ್ತಿದ ಕೈ. ಇತ್ತೀಚೆಗೆ ಉಳಿದುಕೊಳ್ಳಲು ನೆಲೆಯಿಲ್ಲದೆ, ತನ್ನ ಮನೆಯ ಕಂಪೌಂಡ್ ಒಳಗೆ ಭದ್ರತಾ ಸಿಬ್ಬಂಧಿಗಳ ಕಣ್ಣು ತಪ್ಪಿಸಿ ನುಗ್ಗಿದ ನಿರ್ಗತಿಕನಿಗೂ ಸಹಾಯ ಮಾಡಿದ ಕರುಣಾಮಯಿ.

ಇಂತಿಪ್ಪಅಕ್ಷಯ್ ಕುಮಾರ್ ಈಗ ತನಗೆ ಸಿನಿಮಾದಲ್ಲಿ ಮೊದಲು ಅವಕಾಶ ನೀಡಿದ ನಿರ್ದೇಶಕ ರವಿ ಶ್ರೀವಾಸ್ತವ ನೆರವಿಗೆ ಧಾವಿಸಿದ್ದಾರೆ. ಶ್ರೀವಾಸ್ತವ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು ಮೂತ್ರಪಿಂಡ ಬದಲಿ ವ್ಯವಸ್ಥೆ ಮಾಡಲು ಹಣವಿಲ್ಲದೇ, ಹಾಸಿಗೆ ಹಿಡಿದಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಅಕ್ಷಯ್ ಗಮನ ಸೆಳೆದಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾರ್ ನಟ ಈಗಾಗಲೇ ತನ್ನ ತಂಡದವರು ನಿರ್ದೇಶಕರ ನೆರವಾಗಿರುವುದಾಗಿ ಹೇಳಿದ್ದರು.

1991 ರಲ್ಲಿ “ದ್ವಾರಪಾಲ್” ಚಿತ್ರದ ಮೂಲಕ ಅಕ್ಷಯ್ ಕುಮಾರ್ ಗೆ ಶ್ರೀವಾಸ್ತವ ಅವಕಾಶ ನೀಡಿದ್ದರು. ಆದರೆ ಅದು ಅರ್ಧಕ್ಕೆ ನಿಂತಿತ್ತು. ನಂತರ 1992 ರಲ್ಲಿ ಇದೇ ನಿರ್ದೇಶಕರು ಅಕ್ಷಯ್ ಗೆ “ಸೌಗಂಧ್” ಚಿತ್ರದಲ್ಲಿ ಅವಕಾಶ ಸಿಗುವಂತೆ ಮಾಡಿದ್ದರು. ಇದು ಅಕ್ಷಯ್ ಕುಮಾರ್ ನಟನೆಯ ಮೊದಲ ಚಿತ್ರವಾಗಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ಖಾನ್ ದಂಗಲ್ ಚಿತ್ರದ ಟ್ರೇಲರ್ ಹಿಟ್