Publish Date: Tue, 11 Dec 2018 (09:08 IST)
Updated Date: Tue, 11 Dec 2018 (09:11 IST)
ಬೆಂಗಳೂರು: ಮನೆಯಲ್ಲಿ ಹಿರಿಯರಿದ್ದರೆ ರಾತ್ರಿ ವೇಳೆ ಗುಡಿಸಲು ಹೋದರೆ ಬೇಡ ಎಂದು ಖಡಾಖಂಡಿತವಾಗಿ ಹೇಳುವುದನ್ನು ನೋಡಿದ್ದೇವೆ. ಅಷ್ಟಕ್ಕೂ ರಾತ್ರಿ ವೇಳೆ ಗುಡಿಸಬಾರದು ಎಂಬ ಶಾಸ್ತ್ರ ಯಾಕಿದೆ ಗೊತ್ತಾ?
ಸಂಜೆ ವೇಳೆ ಶುಚಿಯಾಗಿರುವ, ದೀಪ ಹಚ್ಚಿಟ್ಟು ಭಕ್ತಿಯಿಂದ ಬೇಡಿಕೊಳ್ಳುವವರ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಎಂಬುದು ಹಿಂದೂ ಧರ್ಮದ ನಂಬಿಕೆ. ಆದರೆ ಸಂಜೆ ವೇಳೆ ಕಸವಿಟ್ಟು ಮನೆಯನ್ನು ಅಶುಚಿಯಾಗಿಟ್ಟುಕೊಂಡರೆ ದಾರಿದ್ರ್ಯ ಬರುವುದು.
ಹಾಗಂತ ಸೂರ್ಯಾಸ್ತವಾದ ಬಳಿಕ ಕಸ ಗುಡಿಸುವುದು ಶುಭಪ್ರದವಲ್ಲ. ಈ ವೇಳೆ ಕಸಬರಿಕೆ ಹಿಡಿದುಕೊಂಡು ಕಸ ಗುಡಿಸಲು ಹೊರಟರೆ ಮನೆಗೆ ಬರುವ ಮಹಾಲಕ್ಷ್ಮಿ ಹೊರಟು ಹೋಗುತ್ತಾಳೆ ಎಂಬುದು ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ