Publish Date: Tue, 11 Dec 2018 (09:00 IST)
Updated Date: Tue, 11 Dec 2018 (09:02 IST)
ಬೆಂಗಳೂರು: ಕೆಲವರಿಗೆ ಜಾತಕದಲ್ಲೇ ದಾರಿದ್ರ್ಯ ಯೋಗವಿರುತ್ತದೆ. ಇಂತಹ ಯೋಗ ಬಂದಾಗ ಏನು ಮಾಡಬೇಕು? ಯಾರನ್ನು ಪೂಜಿಸಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ?
ದರಿದ್ರ ಎನ್ನುವುದು ಕೇವಲ ಐಶ್ವರ್ಯಕ್ಕೆ ಸೀಮಿತವಲ್ಲ. ಸಂಪತ್ತಿನ ಜತೆಗೆ ಆರೋಗ್ಯ, ಸಂತೋಷ, ಕುಟುಂಬ ನೆಮ್ಮದಿ ಇದ್ದರೇ ಮನುಷ್ಯ ಸಂಪೂರ್ಣ ಸಂಪನ್ನನೆನಿಸಿಕೊಳ್ಳುತ್ತಾನೆ. ಹಾಗಿದ್ದರೆ ಇಂತಹ ಎಲ್ಲಾ ಸಂಪತ್ತಿಗೆ ಕೊರತೆ ಬಂದಾಗ ಏನು ಮಾಡಬೇಕು?
ದರಿದ್ರ್ಯ ಯೋಗ ಕಳೆಯಲು ಪ್ರತಿನಿತ್ಯ ದಾರಿದ್ರ್ಯ ದಹನ ಶಿವ ಸ್ತೋತ್ರ ಪಠಿಸಿದರೆ ಒಳಿತಾಗುತ್ತದೆ. ಇದರಿಂದ ಮುಂಬರಲಿರುವ ದಾರಿದ್ರ್ಯ ಯೋಗದ ತಾಪ ಕನಿಷ್ಠವಾಗಿ ಅದನ್ನು ಎದುರಿಸುವ ಶಕ್ತಿವಂತರಾಗುತ್ತೀರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ