Publish Date: Thu, 27 Dec 2018 (09:11 IST)
Updated Date: Thu, 27 Dec 2018 (09:13 IST)
ಬೆಂಗಳೂರು: ದೇವರಿಗೆ ನೈವೇದ್ಯಕ್ಕೆ ಎಂದು ಬಳಸುವ ಆಹಾರ-ಫಲ ವಸ್ತುಗಳಿಗೆ ಉಪ್ಪು ಸೇರಿಸಿ ಇಡುವುದಿಲ್ಲ. ಹೀಗೆಂದು ಹಿರಿಯರು ಯಾಕೆ ನಿಯಮ ರೂಪಿಸಿದ್ದಾರೆ ಗೊತ್ತಾ?
ಉಪ್ಪು ಎಂಬುದು ತಾಮಸ ಆಹಾರ. ಇದು ಪೃಥ್ವಿತತ್ವ ಮತ್ತು ಅಪಾತತ್ವದ ಆಧಾರದಲ್ಲಿ ಮಾಡಿರುವುದಾಗಿದೆ. ಹೀಗಾಗಿ ದೇವರಿಗೆ ನೈವೇದ್ಯವಾಗಿ ನೀಡುವಾಹ ಪ್ರಸಾದ ಅಥವಾ ಅಂತಹ ಆಹಾರದಲ್ಲಿ ಉಪ್ಪು ಸೇರಿಸಬಾರದು.
ಆದರೆ ಇದೇ ನೈವೇದ್ಯವನ್ನು ಭಕ್ತರಿಗೆ ವಿತರಿಸುವಾಗ ಕೊಂಚ ಉಪ್ಪು ಸೇರಿಸಿ ಬಳಸಿದರೆ ತಪ್ಪಿಲ್ಲ. ಇದೇ ರೀತಿ ಕೆಲವೊಮ್ಮೆ ಅಪರಕ್ರಿಯೆಯಲ್ಲಿ ಹಿರಿಯರಿಗೆ ತರ್ಪಣ ನೀಡುವಾಗ ನೈವೇದ್ಯವಾಗಿ ಬಳಸುವ ಕೆಲವೊಂದು ಆಹಾರಕ್ಕೂ ಇದೇ ರೀತಿ ಉಪ್ಪು ಸೇರಿಸದೇ ನೈವೇದ್ಯಕ್ಕಿಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ