Publish Date: Thu, 03 Jan 2019 (09:01 IST)
Updated Date: Thu, 03 Jan 2019 (09:02 IST)
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಒಂದೊಂದು ವಾರ ಒಬ್ಬೊಬ್ಬ ದೇವರಿಗೆ ವಿಶೇಷ ಎನ್ನಲಾಗುತ್ತದೆ. ಆಯಾ ವಾರ ಆಯಾ ದೇವರಿಗೆ ಸಂಬಂಧಿಸಿದ ಸ್ತೋತ್ರ, ಪ್ರಾರ್ಥನೆ ಮಾಡುವುದರಿಂದ ಬೇಡಿದ ವರ ಸಿಗುವುದು ಎನ್ನುವುದು ನಮ್ಮ ನಂಬಿಕೆ.
ಗುರುವಾಗ ರಾಘವೇಂದ್ರ ಸ್ವಾಮಿ, ಶಿರಡಿ ಸಾಯಿ ಬಾಬನ ಆರಾಧಕರಿಗೆ ಮೆಚ್ಚಿನ ದಿನ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಅಷ್ಟೇ ಅಲ್ಲದೆ, ಈ ದಿನ ಮಹಾವಿಷ್ಣುವಿಗೂ ಪ್ರಿಯವಾದ ವಾರ ಎಂಬುದು ನಿಮಗೆ ಗೊತ್ತೇ? ಈ ದಿನ ಮಹಾವಿಷ್ಣುವಿನ ಕುರಿತಾಗಿ ‘ಓಂ ನಮೋ ನಾರಾಯಣಾಯ’ ಎಂದು 108 ಬಾರಿ ಜಪಿಸುವುದು, ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಾವು ಅಂದುಕೊಂಡ ಕಾರ್ಯಗಳು ನೆರವೇರುವುದು ಎಂಬ ನಂಬಿಕೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Thu, 03 Jan 2019 (09:01 IST)
Updated Date: Thu, 03 Jan 2019 (09:02 IST)