Select Your Language

Notifications

webdunia
webdunia
webdunia
webdunia

ಕಾಂತಿಯುತ ಮುಖ ನಿಮ್ಮದಾಗಬೇಕೆ? ಇದನ್ನು ಟ್ರೈ ಮಾಡಿ

ಕಾಂತಿಯುತ ಮುಖ ನಿಮ್ಮದಾಗಬೇಕೆ? ಇದನ್ನು ಟ್ರೈ ಮಾಡಿ
ಮೈಸೂರು , ಬುಧವಾರ, 10 ನವೆಂಬರ್ 2021 (09:49 IST)
ಈರುಳ್ಳಿಯಲ್ಲಿ ಹಲವಾರು ಬಗೆಯ ಆರೋಗ್ಯ ಗುಣಗಳು ಇದ್ದು, ದೇಹಾರೋಗ್ಯದ ಜತೆಗೆ ಇದು ಸೌಂದರ್ಯದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದು.
ಕೆಲವೊಂದು ಮನೆಮದ್ದುಗಳಲ್ಲಿ ಈರುಳ್ಳಿಯನ್ನು ಬಳಕೆ ಮಾಡಿಕೊಳ್ಳುವರು. ಅದೇ ರೀತಿಯಾಗಿ ತ್ವಚೆಯ ಸೌಂದರ್ಯ ವೃದ್ಧಿಸಲು ಈರುಳ್ಳಿ ಬಳಸಬಹುದು.
ಅಡುಗೆಗೆ ಬಳಸುವಂತಹ ಈರುಳ್ಳಿಯನ್ನು ತ್ವಚೆಯ ಸೌಂದರ್ಯ ವೃದ್ಧಿಸಲು ಬಳಕೆ ಮಾಡಿದರೆ ಅದು ಎಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡುವುದು ಎನ್ನುವುದು ನಿಮಗೆ ತಿಳಿಯದು.
ಆರೋಗ್ಯಕಾರಿ ತ್ವಚೆ
webdunia

•ಹಸಿ ಈರುಳ್ಳಿಯಲ್ಲಿ ಸಾವಯವ ಸಲ್ಫರ್ ಅಂಶವು ಅತ್ಯಧಿಕ ಮಟ್ಟದಲ್ಲಿದ್ದು, ಇದು ಚರ್ಮದ ರಂಧ್ರಗಳನ್ನು ಶುದ್ಧವಾಗಿಡುವುದು ಮತ್ತು ಮೊಡವೆಗಳನ್ನು ದೂರವಿಡುವುದು.
•ಫ್ಲಾವನಾಯ್ಡ್ ಅಧಿಕವಾಗಿ ಇರುವ ಇದು ಚರ್ಮವನ್ನು ಎಲ್ಲಾ ರೀತಿಯ ಒತ್ತಡಗಳಿಂದ ರಕ್ಷಣೆ ಮಾಡುವುದು. ನಿಮ್ಮ ಫೇವರೆಟ್ ಸಲಾಡ್ ನಲ್ಲಿ ಈರುಳ್ಳಿಯನ್ನು ಬಳಕೆ ಮಾಡಿಕೊಂಡರೂ ಸಾಕು.
•ಕೆಲವರಿಗೆ ಹಸಿ ಈರುಳ್ಳಿಯ ವಾಸನೆಯು ಅಷ್ಟೊಂದು ಆಗಿ ಬರದು. ಇದಕ್ಕಾಗಿ ಅವರು ಇದನ್ನು ಬೇಯಿಸಿ ಅಡುಗೆಯಲ್ಲಿ ಬಳಸಬಹುದು. ಇದರಲ್ಲಿ ನಾರಿನಾಂಶ, ತಾಮ್ರದ ಅಂಶವು ಉತ್ತಮ ಪ್ರಮಾಣದಲ್ಲಿದೆ.
•ಇದು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರವಿಡುವುದು ಹಾಗೂ ಚಯಾಪಚಯ ಕ್ರಿಯೆ ಉತ್ತಮಪಡಿಸುವುದು. ಈರುಳ್ಳಿಯನ್ನು ಅತಿಯಾಗಿ ಬೇಯಿಸಿದರೆ ಅದರಲ್ಲಿನ ಪೋಷಕಾಂಶಗಳು ಮಾಯವಾಗುವುದು.
ಮೊಡವೆ ನಿವಾರಣೆ
webdunia

•ಈರುಳ್ಳಿ ರಸದಿಂದ ಮುಖಕ್ಕೆ ಮಸಾಜ್ ಮಾಡಿ ಮತ್ತು ಮೊಡವೆ ನಿವಾರಣೆ ಮಾಡುವಂತಹ ಫೇಸ್ ಪ್ಯಾಕ್ನ್ನು ಇದರಿಂದ ತಯಾರಿಸಬಹುದು.
•ಒಂದು ಚಮಚ ಈರುಳ್ಳಿ ರಸ ಮತ್ತು ಒಂದು ಚಮಚ ಆಲಿವ್ ತೈಲ ಅಥವಾ ಬಾದಾಮಿ ತೈಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಹಚ್ಚಬೇಕು. 15 ನಿಮಿಷ ಬಳಿಕ ತಣ್ಣೀರಿನಿಂದ ತ್ವಚೆಯನ್ನು ಸರಿಯಾಗಿ ತೊಳೆಯಿರಿ.
•ಒಂದು ಚಮಚ ತಾಜಾ ಈರುಳ್ಳಿ ರಸ ಮತ್ತು ಒಂದು ಚಮಚ ಮೊಸರನ್ನು ಬೆರೆಸಿಕೊಳ್ಳಿ. ಇದಕ್ಕೆ 4-5 ಹನಿ ಲ್ಯಾವೆಂಡರ್ ತೈಲ ಹಾಕಿ ಮಿಶ್ರಣ ಮಾಡಿ. ಇದನ್ನು ನಯವಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.
•ಒಂದು ಚಮಚ ಲಿಂಬೆ ರಸ ಮತ್ತು ಎರಡು ಚಮಚ ಈರುಳ್ಳಿ ರಸ ಬೆರೆಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದರಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ಮುಖಕ್ಕೆ ಹಾಕಿ ಹಚ್ಚಿಕೊಳ್ಳಿ. 10-15 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
•ಒಂದು ಚಮಚ ಅರಶಿನ ಮತ್ತು ಒಂದು ಚಮಚ ತಾಜಾ ಈರುಳ್ಳಿ ರಸ ಹಾಕಿಕೊಳ್ಳಿ ಮತ್ತು ನಿತ್ಯವೂ ಮಸಾಜ್ ಮಾಡಿ.
ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಅದರ ರಸ ತೆಗೆಯಿರಿ. ಇದರಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರನ್ನು ಸರಿಯಾಗಿ ಮುಖಕ್ಕೆ ಹಚ್ಚಿಕೊಂಡರೆ ಆಗ ನೆರಿಗೆ ನಿವಾರಣೆ ಆಗುವುದು ಮತ್ತು ಚರ್ಮವು ಬಿಗಿಯಾಗುವುದು ಹಾಗೂ ಕಾಂತಿ ಪಡೆಯುವುದು.
ಚರ್ಮದ ಕಾಂತಿ
ಈರುಳ್ಳಿಯು ಚರ್ಮವನ್ನು ಶುದ್ಧೀಕರಿಸಿ ಅದರಿಂದ ಚರ್ಮದ ಬಣ್ಣವನ್ನು ಉತ್ತಮಪಡಿಸುವುದು. ಇದಕ್ಕಾಗಿ ಎರಡು ಚಮಚ ಈರುಳ್ಳಿ ರಸ, ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಹಾಲು ಮತ್ತು ಒಂದು ಚಮಚ ಜಾಯಿಕಾಯಿ ಹಾಕಿ. ಇದರ ಪೇಸ್ಟ್ ಮಾಡಿಕೊಂಡು ಸರಿಯಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದರ ಬಳಿಕ 15 ನಿಮಿಷ ಬಿಟ್ಟು ತೊಳೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಶೀತದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೆ?