Select Your Language

Notifications

webdunia
webdunia
webdunia
webdunia

ಅಯೋಧ್ಯೆ ಭೂಮಿಪೂಜೆಗೆ ಮುಹೂರ್ತ ನೀಡಿದ ಬೆಳಗಾವಿ ಜ್ಯೋತಿಷಿಗೆ ಬೆದರಿಕೆ ಕರೆ

ಅಯೋಧ್ಯೆ ಭೂಮಿಪೂಜೆಗೆ ಮುಹೂರ್ತ ನೀಡಿದ ಬೆಳಗಾವಿ ಜ್ಯೋತಿಷಿಗೆ ಬೆದರಿಕೆ ಕರೆ
ನವದೆಹಲಿ , ಮಂಗಳವಾರ, 4 ಆಗಸ್ಟ್ 2020 (10:33 IST)
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಮುಹೂರ್ತ ನೀಡಿದ ಜ್ಯೋತಿಷಿ ವಿಜಯೇಂದ್ರ ಶರ್ಮಾಗೆ ಬೆದರಿಕೆ ಕರೆ ಬರತೊಡಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.


ಬೆಳಗಾವಿ ಮೂಲದ ವಿಜಯೇಂದ್ರ ಶರ್ಮಾಗೆ ಅಪರಿಚಿತ ಕರೆಗಳು ಬರುತ್ತಿದ್ದು, ಭೂಮಿ ಪೂಜೆ ಮುಹೂರ್ತ ಬದಲಾಯಿಸಿ. ಇಲ್ಲದೇ ಹೋದರೆ ತಕ್ಕ ಶಾಸ್ತಿ ಅನುಭವಿಸಬೇಕಾದೀತು ಎಂದು ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ.

ಈ ಹಿನ್ನಲೆಯಲ್ಲಿ ವಿಜಯೇಂದ್ರ ಶರ್ಮಾಗೆ ಭದ್ರತೆ ನೀಡಲಾಗಿದೆ. ಕರೆ ಮಾಡಿದ ವ್ಯಕ್ತಿ ಯಾಕೆ ಆಗಸ್ಟ್ 5 ರಂದೇ ಮುಹೂರ್ತ ನೀಡಿದ್ದೀರಿ, ಇದನ್ನು ಬದಲಾಯಿಸಿ, ಇಲ್ಲದೇ ಹೋದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ಈಗ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಪತ್ನಿಗೆ ಸ್ನೇಹಿತರ ಜೊತೆ ಮಲಗು ಎಂದ ಪಾಪಿ ಪತಿ