Publish Date: Sun, 18 Oct 2020 (09:10 IST)
Updated Date: Sun, 18 Oct 2020 (09:11 IST)
ಬೆಂಗಳೂರು: ಹೆಚ್ಚಿನವರು ದೇವಾಲಯಕ್ಕೆ ಹೋಗುವಾಗ ಆರಂಭದಲ್ಲೇ ಇರುವ ಗಂಟೆ ನಾದ ಮಾಡಿ ಒಳಗಡಿಯಿಡುತ್ತಾರೆ. ಆದರೆ ದೇವಾಲಯ ಪ್ರವೇಶಿಸುವ ಮುನ್ನ ಗಂಟಾ ನಾದ ಮಾಡುವುದು ಯಾಕೆ ಗೊತ್ತಾ?
ಗಂಟೆ ಎನ್ನುವುದು ಸಕಲ ಋಣಾತ್ಮಕ ಅಂಶವನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಕೇವಲ ಸುತ್ತಲ ಪರಿಸರದಲ್ಲಿ ಮಾತ್ರವಲ್ಲ, ನಮ್ಮೊಳಗಿನ ಋಣಾತ್ಮಕ ಭಾವಗಳೂ ಇದರಿಂದ ದೂರವಾಗಿ ದೇವರಲ್ಲಿ ಗಮನ ಕೇಂದ್ರೀಕೃತವಾಗುತ್ತದೆ. ಗಂಟೆಯ ನಾದ ಸುಮಾರು ಏಳು ಸೆಕೆಂಡುಗಳ ಕಾಲ ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ. ಹೀಗಾಗಿ ಗಂಟಾ ನಾದ ಮಾಡಿ ದೇವಾಲಯದೊಳಗೆ ಹೋದರೆ ಉತ್ತಮ.