Publish Date: Mon, 19 Oct 2020 (09:08 IST)
Updated Date: Mon, 19 Oct 2020 (09:10 IST)
ಬೆಂಗಳೂರು: ದೇವಾಲಯಗಳಲ್ಲಿ ಗರ್ಭಗುಡಿಯಲ್ಲಿ ಮಧ್ಯಭಾಗದಲ್ಲೇ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕೆ ಕಾರಣವೇನು ಗೊತ್ತಾ?
ಗರ್ಭಗುಡಿಯ ಮಧ್ಯಭಾಗದಲ್ಲಿ ವಿಶೇಷ ಶಕ್ತಿ ಮತ್ತು ಸಕಾರಾತ್ಮಕ ಭಾವವಿರುತ್ತದೆ. ಈ ಸಕಾರಾತ್ಮಕ ಅಂಶ ಹೊರಗೆ ನಿಂತು ಕೈ ಮುಗಿಯುವ ಭಕ್ತರಲ್ಲೂ ಇರಬೇಕು ಎಂಬುದು ಇದರ ಹಿಂದಿರುವ ಕಾರಣ. ಆದರೆ ದೇವರ ವಿಗ್ರಹದ ನೇರಕ್ಕೆ ನಿಂತು ಕೈ ಮುಗಿಯಬೇಡಿ. ಎಡ ಅಥವಾ ಬಲ ಬದಿಗೆ ನಿಂತು ನಮಸ್ಕಾರ ಮಾಡಿ. ದೈವಿಕ ಶಕ್ತಿಯ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ಮಾನವ ದೇಹಕ್ಕೆ ಇಲ್ಲ ಎಂಬುದೇ ಇದಕ್ಕೆ ಕಾರಣ.