Select Your Language

Notifications

webdunia
webdunia
webdunia
webdunia

ಕೈಯಲ್ಲಿ ಹಣ ಉಳಿಯದೇ ಇರಲು ಕಾರಣವೇನು?

Lakshmi Godess

Krishnaveni K

ಬೆಂಗಳೂರು , ಶುಕ್ರವಾರ, 12 ಜನವರಿ 2024 (10:35 IST)
ಬೆಂಗಳೂರು: ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ ಹಣ ಕೈಗೆ ಬಂದ ತಕ್ಷಣ ಖಾಲಿಯಾಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಇದನ್ನು ನೋಡಿ.

ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣವೇನು? ಹಣ ವಿಪರೀತ ಖರ್ಚಾದಾಗ ಸಹಜವಾಗಿಯೇ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುತ್ತೀರಿ. ಲಕ್ಷ್ಮೀ ಕಟಾಕ್ಷ ಕಡಿಮೆಯಾದಾಗ ಈ ರೀತಿ ಆಗುತ್ತದೆ.

ಇದಕ್ಕೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೋಡಬೇಕು. ಇದಕ್ಕೆ ನಾನಾ ದಾರಿಗಳಿವೆ. ಆ ಪೈಕಿ ಮುಖ್ಯವಾದುದು ಲಕ್ಷ್ಮೀ ಪಠಣ ಸ್ತೋತ್ರ ಮಾಡುವುದು.  ಪ್ರತೀ ತಿಂಗಳು ಹುಣ್ಣಿಮೆಯಂದು ಈ ವ್ರತ ಮಾಡಬೇಕು.

ಬೆಳಿಗ್ಗೆ ಸ್ನಾನ ಮಾಡಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ ಅಲ್ಲಿಯೇ ಕೂತು 108 ಬಾರಿ ಮಹಾಲಕ್ಷ್ಮಿ ಮಂತ್ರವನ್ನು ಓದಿ. ಲಕ್ಷ್ಮೀ ದೇವಿಯ ಯಾವುದೇ ಸ್ತೋತ್ರವನ್ನು ಓದಬಹುದು. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಹಣಕಾಸಿನ ಕಷ್ಟಗಳು ದೂರವಾಗಿ ಲಕ್ಷ್ಮೀ ಕೃಪೆಗೆ ಪಾತ್ರರಾಗುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?