Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಮಂಗಳವಾರ, 18 ಜೂನ್ 2019 (07:18 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸಿದರೂ ಸಿಗದೇ ಮನಸ್ಸಿಗೆ ಬೇಸರವಾಗುವುದು. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.

ವೃಷಭ: ನೀವು ಅಂದುಕೊಳ್ಳುವ ಕೆಲಸಕ್ಕೆ ಸಂಗಾತಿಯ ಸಂಪೂರ್ಣ ಸಹಕಾರ ದೊರೆಯುವುದು. ದೈವಾನುಕೂಲದಿಂದ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ವಿವಾಹ ಸಂಬಂಧ ಕೂಡಿಬರಲಿದೆ. ಪ್ರೇಮಿಗಳಿಗೆ ಹಿರಿಯರ ಸಮ್ಮತಿ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆರ್ಥಿಕವಾಗಿ ಸಮಾಧಾನಕರ ದಿನ.

ಕರ್ಕಟಕ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಸಂತಸ ಸಿಗುವುದು. ವಿದ್ಯಾರ್ಥಿಗಳು ಪ್ರಶಂಸೆಗೊಳಗಾಗುವರು. ಆದರೆ ಆರ್ಥಿಕವಾಗಿ ಖರ್ಚಿನ ಬಗ್ಗೆ ಹಿಡಿತ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ಅಪರಿಚಿತರನ್ನು ನಂಬಿ ಹಣ ಹೂಡಿಕೆ ಮಾಡಲು ಹೋಗಬೇಡಿ. ಆರ್ಥಿಕವಾಗಿ ಹೆಚ್ಚು ಎಚ್ಚರಿಕೆಯಿಂದಿರಬೇಕಾದ ದಿನವಿದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಸನ್ಮಿತ್ರರ ಭೇಟಿಯಾಗುವಿರಿ.

ಕನ್ಯಾ: ಮಹಿಳಾ ಉದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ನಿರುದ್ಯೋಗಿಗಳು ಪಾಲಿಗೆ ಬಂದಿದ್ದನ್ನು ಪಂಚಾಮೃತ ಎಂದು ಸ್ವೀಕರಿಸಬೇಕು. ತಾಳ್ಮೆಯಿರಲಿ.

ತುಲಾ: ಸುಖ-ದುಃಖ ಎರಡೂ ಸಮನಾಗಿ ಎದುರಿಸಬೇಕಾದ ದಿನವಿದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಅನಿರೀಕ್ಷಿತವಾಗಿ ಖರ್ಚೂ ಎದುರಾಗಬಹುದು. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.

ವೃಶ್ಚಿಕ: ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಧಾರ್ಮಿಕ ಕಾರ್ಯಳಿಗಾಗಿ ಧನವಿನಿಯೋಗ ಮಾಡುವಿರಿ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ವಿನಾಕಾರಣ ನಿಮ್ಮ ದುಡುಕು ವರ್ತನೆ ಅಪಘಾತಕ್ಕೆ ಕಾರಣವಾದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಅಧಿಕ ಧನವಿನಿಯೋಗ ಮಾಡಲಿದ್ದೀರಿ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ಮಕರ: ಸಂತಾನೇಪೇಕ್ಷಿತ ದಂಪತಿಗಳು ದೇವರ ಮೊರೆಹೋಗುವರು. ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನವಾಗಲಿದೆ.

ಕುಂಭ: ಅನಗತ್ಯ ಚಿಂತೆಗಳಿಗೆ ಅವಕಾಶ ಮಾಡಿಕೊಡದಿರಿ. ಹೊಸ ವ್ಯವಹಾರಗಳಿಗೆ ಕೈಹಾಕಲು ಸೂಕ್ತ ದಿನ. ಆದರೆ ವಾಹನ ಚಲಾಯಿಸುವವರು ಎಚ್ಚರಿಕೆಯಿಂದಿರುವುದು ಅಗತ್ಯ. ಹಣಕಾಸಿನ ವಿಚಾರದಲ್ಲಿ ಬಿಗುವಿನ ನಿಲುವು ತಾಳಬೇಕು.

ಮೀನ: ಇದುವರೆಗೆ ಕಾಡುತ್ತಿದ್ದ ಆಸ್ತಿ ವಿವಾದಗಳು ಹಿರಿಯರ ಮಧ್ಯಸ್ಥಿಕೆಯಿಂದ ನಿವಾರಣೆಯಾಗುವುದು. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಆರೋಗ್ಯದಲ್ಲಿ ಸುಧಾರಣೆಯಾಗಿ ನೆಮ್ಮದಿ ಕಾಣುವಿರಿ.
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಮೇಷ: ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸಿದರೂ ಸಿಗದೇ ಮನಸ್ಸಿಗೆ ಬೇಸರವಾಗುವುದು. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.

ವೃಷಭ: ನೀವು ಅಂದುಕೊಳ್ಳುವ ಕೆಲಸಕ್ಕೆ ಸಂಗಾತಿಯ ಸಂಪೂರ್ಣ ಸಹಕಾರ ದೊರೆಯುವುದು. ದೈವಾನುಕೂಲದಿಂದ ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ವಿವಾಹ ಸಂಬಂಧ ಕೂಡಿಬರಲಿದೆ. ಪ್ರೇಮಿಗಳಿಗೆ ಹಿರಿಯರ ಸಮ್ಮತಿ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆರ್ಥಿಕವಾಗಿ ಸಮಾಧಾನಕರ ದಿನ.

ಕರ್ಕಟಕ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಸಂತಸ ಸಿಗುವುದು. ವಿದ್ಯಾರ್ಥಿಗಳು ಪ್ರಶಂಸೆಗೊಳಗಾಗುವರು. ಆದರೆ ಆರ್ಥಿಕವಾಗಿ ಖರ್ಚಿನ ಬಗ್ಗೆ ಹಿಡಿತ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ಅಪರಿಚಿತರನ್ನು ನಂಬಿ ಹಣ ಹೂಡಿಕೆ ಮಾಡಲು ಹೋಗಬೇಡಿ. ಆರ್ಥಿಕವಾಗಿ ಹೆಚ್ಚು ಎಚ್ಚರಿಕೆಯಿಂದಿರಬೇಕಾದ ದಿನವಿದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಸನ್ಮಿತ್ರರ ಭೇಟಿಯಾಗುವಿರಿ.

ಕನ್ಯಾ: ಮಹಿಳಾ ಉದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ನಿರುದ್ಯೋಗಿಗಳು ಪಾಲಿಗೆ ಬಂದಿದ್ದನ್ನು ಪಂಚಾಮೃತ ಎಂದು ಸ್ವೀಕರಿಸಬೇಕು. ತಾಳ್ಮೆಯಿರಲಿ.

ತುಲಾ: ಸುಖ-ದುಃಖ ಎರಡೂ ಸಮನಾಗಿ ಎದುರಿಸಬೇಕಾದ ದಿನವಿದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಅನಿರೀಕ್ಷಿತವಾಗಿ ಖರ್ಚೂ ಎದುರಾಗಬಹುದು. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.

ವೃಶ್ಚಿಕ: ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಧಾರ್ಮಿಕ ಕಾರ್ಯಳಿಗಾಗಿ ಧನವಿನಿಯೋಗ ಮಾಡುವಿರಿ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ವಿನಾಕಾರಣ ನಿಮ್ಮ ದುಡುಕು ವರ್ತನೆ ಅಪಘಾತಕ್ಕೆ ಕಾರಣವಾದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಅಧಿಕ ಧನವಿನಿಯೋಗ ಮಾಡಲಿದ್ದೀರಿ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ಮಕರ: ಸಂತಾನೇಪೇಕ್ಷಿತ ದಂಪತಿಗಳು ದೇವರ ಮೊರೆಹೋಗುವರು. ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನವಾಗಲಿದೆ.

ಕುಂಭ: ಅನಗತ್ಯ ಚಿಂತೆಗಳಿಗೆ ಅವಕಾಶ ಮಾಡಿಕೊಡದಿರಿ. ಹೊಸ ವ್ಯವಹಾರಗಳಿಗೆ ಕೈಹಾಕಲು ಸೂಕ್ತ ದಿನ. ಆದರೆ ವಾಹನ ಚಲಾಯಿಸುವವರು ಎಚ್ಚರಿಕೆಯಿಂದಿರುವುದು ಅಗತ್ಯ. ಹಣಕಾಸಿನ ವಿಚಾರದಲ್ಲಿ ಬಿಗುವಿನ ನಿಲುವು ತಾಳಬೇಕು.

ಮೀನ: ಇದುವರೆಗೆ ಕಾಡುತ್ತಿದ್ದ ಆಸ್ತಿ ವಿವಾದಗಳು ಹಿರಿಯರ ಮಧ್ಯಸ್ಥಿಕೆಯಿಂದ ನಿವಾರಣೆಯಾಗುವುದು. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಆರೋಗ್ಯದಲ್ಲಿ ಸುಧಾರಣೆಯಾಗಿ ನೆಮ್ಮದಿ ಕಾಣುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇರುವೆಗಳ ಗುಂಪು ಮನೆಯೊಳಗೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ?