Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 14 ಅಕ್ಟೋಬರ್ 2020 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಪ್ರೀತಿ ಪಾತ್ರರ ಆರೋಗ್ಯ ಸ್ಥಿತಿ ಚಿಂತೆಗೆ ಕಾರಣವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಯನ್ನು ತಡೆಯಲು ಯಾರಿಂದಲೂ ಸಾಧ‍್ಯವಾಗದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ತಾಳ್ಮೆ ಅಗತ್ಯ.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ಏರ್ಪಡಿಸಲು ಸಿದ್ಧತೆ ನಡೆಸುವಿರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವೃತ್ತಿರಂಗದಲ್ಲಿ ಉನ್ನತಿಗೆ ಏರುವ ಅವಕಾಶವಿದೆ. ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಿ.

ಮಿಥುನ: ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ಕ್ರಿಯಾತ್ಮಕ ಯೋಚನೆಗಳಿಂದ ಮೇಲಧಿಕಾರಿಗಳ ಮನಸ್ಸು ಗೆಲ್ಲಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಭರವಸೆ ಸಿಗಲಿದೆ. ಯಂತ್ರೋಪಕರಣಗಳಿಂದ ಅಪಾಯ ಎದುರಾಗಬಹುದು, ಎಚ್ಚರಿಕೆಯಿರಲಿ.

ಕರ್ಕಟಕ: ಸಹೋದರ ವರ್ಗದವರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರಾದೀತು. ಎಚ್ಚರಿಕೆಯಿರಲಿ.

ಸಿಂಹ: ಯಾರು ಏನೇ ಅಂದರೂ ನಿಮ್ಮ ದಾರಿ ನಿಮಗೆ ಹಠವಾದಿ ಭಾವ ತೋರಲಿದ್ದೀರಿ. ಇದು ಕೆಲವರ ಅಸಮಾಧಾನಕ್ಕೆ ಗುರಿಯಾದೀತು. ಮನೆಗೆ ಬೇಕಾದ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವ ಎಡವಟ್ಟಿನಿಂದ ಪಶ್ಚಾತ್ತಾಪ ಪಡುವಂತಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಅನಾನುಕೂಲಗಳು ಕಂಡುಬಂದೀತು. ತಾಳ್ಮೆ ಸಂಯಮ ಅಗತ್ಯ. ನೂತನ ದಂಪತಿಗಳಿಗೆ ಸಂತಾನ ಫಲ ಯೋಗವಿದೆ.

ತುಲಾ: ಸಣ್ಣ ಪುಟ್ಟ ಕೆಲಸಗಳಿಗೂ ಪ್ರಯಾಸಪಡಬೇಕಾದೀತು. ಕಷ್ಟಪಟ್ಟರೆ ಮಾತ್ರ ಫಲ ಸಿಗುವುದು. ಸರಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದಾರೆ.

ವೃಶ್ಚಿಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬಾರದೇ ನಿರಾಸೆಯಾದೀತು. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದೆ. ಪತ್ನಿ ಮಕ್ಕಳೊಂದಿಗೆ ಸುಂದರ ಕ್ಷಣ ಕಳೆಯುವ ಯೋಗವನ್ನು ಕಳೆದುಕೊಳ್ಳಬೇಡಿ.

ಧನು: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳು ಮಧುಚಂದ್ರ ಯಾತ್ರೆ ಮಾಡಲಿದ್ದಾರೆ. ಇಷ್ಟ ಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ಎಲ್ಲವೂ ನೀವೆಣಿಸಿದಂತೇ ನಡೆಯಲಿದೆ. ಚಿಂತೆ ಬೇಡ.

ಮಕರ: ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಮಾನಸಿಕವಾಗಿ ನಿರುತ್ಸಾಹಕ್ಕೊಳಗಾಗಲಿದ್ದೀರಿ. ನಿಮ್ಮ ಸಮಸ್ಯೆಗಳನ್ನು ಆಪ್ತರ ಬಳಿ ಹಂಚಿಕೊಳ್ಳುವುದು ಒಳಿತು. ವೃತ್ತಿರಂಗದಲ್ಲಿ ಅನಗತ್ಯ ಸಂಘರ್ಷಕ್ಕಿಳಿಯಬೇಡಿ.

ಕುಂಭ: ದೈವಾನುಗ್ರಹದಿಂದ ನೀವು ಇಂದು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆ ಎದುರಾದೀತು. ಸಂಗಾತಿಯ ಮನಸ್ಸಿನ ಆಸೆ ಈಡೇರಿಸಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆ ಸಹೋದ್ಯೋಗಿಗಳನ್ನೂ ಅಸೂಯೆಗೊಳಪಡಿಸಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ಕಿರು ಓಡಾಟ ನಡೆಸುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಣದ ಸಮಸ್ಯೆ ದೂರವಾಗಲು ಈ ಗ್ರಹವನ್ನು ಹೀಗೆ ಅನುಕೂಲ ಮಾಡಿಕೊಳ್ಳಿ