Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 3 ಏಪ್ರಿಲ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ  ಅಸಡ್ಡೆ ಅಸಹನೆ ಹೆಚ್ಚಿಸಲಿದೆ. ನಿಮ್ಮ ಕೆಲಸಗಳಲ್ಲೂ ಹರಕೆ ಸಂದಾಯ ಮಾಡಿದರೆ ಸಾಕು ಎಂಬ ಮನೋಭಾವ ಬರಲಿದೆ. ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಮಾಡಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಕೂಡಿಟ್ಟ ಹಣ ಕರಗಿ ಹೋದ ಚಿಂತೆ ಕಾಡಲಿದೆ. ಆರ್ಥಿಕವಾಗಿ ಧನಾದಾಯಕ್ಕೆ ನಾನಾ ಮಾರ್ಗಗಳನ್ನು ಯೋಚಿಸುವಿರಿ. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ಆರೋಗ್ಯದ ಬಗ್ಗೆ ವಿನಾಕಾರಣ ಚಿಂತೆ ಬೇಡಿ.

ಮಿಥುನ: ಮಿತ್ರರಿಂದ ಸಿಗುವ ನೆರವು ನಿಮ್ಮ ಕಷ್ಟಗಳನ್ನು ದೂರ ಮಾಡಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಾನಾ ರೀತಿಯ ಅಡ್ಡಿ ಬಂದರೂ ಜಾಣ್ಮೆಯಿಂದ ನಿಭಾಯಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕರ್ಕಟಕ: ಅಧಿಕ ಧನಲಾಭ ತರುವ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಅಪರಿಚಿತರೊಂದಿಗೆ ವ್ಯವಹರಿಸುವಾಗ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಹಣಕಾಸಿನ ತೊಂದರೆಗಳು ಎದುರಾಗಲಿವೆ. ಕಷ್ಟದ ದಿನಗಳನ್ನು ಎದುರಿಸಲು ಇಂದೇ ಸಿದ್ಧರಾಗಿ.

ಸಿಂಹ: ಅನೇಕ ರೀತಿಯ ಚಿಂತೆಗಳು ಮನದಲ್ಲಿ ಕಾಡಲಿದ್ದು, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ ಉಂಟಾಗಬಹುದು. ಅಂದುಕೊಂಡ ರೀತಿಯಲ್ಲಿ ನೆರವೇರದೇ ನಿರಾಸೆಯಾಗಬಹುದು. ಸಂಯಮ ಅಗತ್ಯ. ದೂರ ಸಂಚಾರವನ್ನು ಮುಂದೂಡುವುದು ಒಳಿತು.

ಕನ್ಯಾ: ನಿಮ್ಮ ಕೆಲವೊಂದು ಮಾತು ಮನೆಯಲ್ಲಿ ಶಾಂತಿ ಕದಡಲು ಕಾರಣವಾದೀತು. ದುಡುಕು ಮಾತು, ವರ್ತನೆಗೆ ಕಡಿವಾಣ ಹಾಕುವುದು ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಿತ್ರ ವೃಂದದವರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ.

ತುಲಾ: ಎಷ್ಟೋ ದಿನದಿಂದ ಭೇಟಿಯಾಗಬೇಕೆಂದುಕೊಂಡಿದ್ದ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿದ್ದರೂ ಸಂಗಾತಿಯ ಸಹಕಾರದಿಂದ ಸುಗಮವಾಗಿ ನೆರವೇರಿಸುವಿರಿ. ಧಾರ್ಮಿಕವಾಗಿ ಭಕ್ತಿ ಹೆಚ್ಚಲಿದೆ. ದೇವತಾ ಪ್ರಾರ್ಥನೆ ಮಾಡುವಿರಿ.

ವೃಶ್ಚಿಕ: ವ್ಯವಹಾರದಲ್ಲಿ ಇದುವರೆಗೆ ನಿಮ್ಮ ಬೆನ್ನ ಹಿಂದೆ ನಡೆಯುತ್ತಿದ್ದ ಸಂಚುಗಳು ಬಯಲಾಗಲಿವೆ. ಶತ್ರುಪೀಡೆ ನಾಶವಾಗಿ ಆರ್ಥಿಕವಾಗಿ ಬರಬೇಕಿದ್ದ ಹಣ ಸಂದಾಯವಾಗಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗಲಿದೆ.

ಧನು: ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಅರ್ಧಕ್ಕೇ ನಿಂತ ಕೆಲಸಗಳಿಗೆ ಮರಳಿ ಚಾಲನೆ ನೀಡಲಿದ್ದೀರಿ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಂಗಾತಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣವನ್ನು ಜೋಪಾನವಾಗಿ ರಕ್ಷಿಸುವ ಹೊಣೆಗಾರಿಕೆ ಬೀಳಲಿದೆ.

ಕುಂಭ: ದುರ್ಜನರ ಸಂಗ ಯಾವತ್ತೂ ಗರ್ವಭಂಗ ಎಂಬುದನ್ನು ಮರೆಯಬೇಡಿ. ಕೆಟ್ಟ ಸ್ನೇಹ ಸಂಗದಿಂದ ಹೊರಬಾರದೇ ಇದ್ದರೆ ಅಪವಾದ ತಪ್ಪದು. ಹಿರಿಯರಿಗೆ ಧಾರ್ಮಿಕ ಕ್ಷೇತ್ರದ ಸಂದರ್ಶನ ಯೋಗವಿದೆ. ಸ್ವ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ.

ಮೀನ: ಮಹಿಳೆಯರಿಗೆ ಗೃಹ ಕೃತ್ಯಗಳ ಹೊರೆ ಅನುಭವಕ್ಕೆ ಬರಲಿದೆ. ವಿನಾಕಾರಣ ಮನಸ್ಸಿಗೆ ಇಲ್ಲದ ವಿಚಾರ ತಂದುಕೊಳ್ಳಬೇಡಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಿರಿ. ಇಷ್ಟ ಭೋಜನ ಯೋಗವಿದೆ. ಆದರೆ ನಾಲಿಗೆ ಚಪಲಕ್ಕೆ ಕಡಿವಾಣವಿರಲಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments