Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 21 ಜನವರಿ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ವಾತಾವರಣ ಸಮಾಧಾನಕರವಾಗಿರಲಿದೆ. ಆದರೆ ವಿನಾಕಾರಣ ಚಿಂತೆ ಮಾಡುವುದು ಬಿಡಿ. ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಬಹುದು. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟು ಅಗತ್ಯ.

ವೃಷಭ: ಆತ್ಮವಿಶ್ವಾಸದಿಂದ ಹೊಸ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಜೀವನದಲ್ಲಿ ಆಶಾವಾದಿಗಳಾಗಿರಬೇಕು. ವೃತ್ತಿರಂಗದಲ್ಲಿ ಸ್ಥಾನ ಮಾನ ವೃದ್ಧಿಸಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ನ್ಯಾಯಾಲಯದ ಕಲಾಪಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ. ದಾಯಾದಿ ಕಲಹಗಳು ಅಂತ್ಯವಾಗಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯಸಿದ್ಧಿಯಾಗುವುದು. ಖರ್ಚು ವೆಚ್ಚಗಳು ಇದ್ದರೂ ಆದಾಯಕ್ಕೆ ಕೊರೆತೆಯಾಗದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ದೊರೆಯುವುದರಿಂದ ನೆಮ್ಮದಿ ಸಿಗಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಸಿಗದೇ ನಿರಾಶೆಯಾಗಬಹುದು. ಶತ್ರುಭಯ ಕಾಡಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಗೆ ಕಡಿವಾಣ ಹಾಕಿ. ತಾಳ್ಮೆ ಅಗತ್ಯ.

ಸಿಂಹ: ಕಳೆದು ಹೋದ ವಸ್ತು ಮರಳಿ ನಿಮ್ಮ ಬಳಿಗೆ ಬರಲಿದೆ. ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ದೂರ ಸಂಚಾರದಿಂದ ಕಾರ್ಯಸಿದ್ಧಿ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ.

ಕನ್ಯಾ: ಕೆಲಸ ಕಾರ್ಯದಲ್ಲಿ ಜಡತ್ವ ಕಂಡುಬರಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ತೋರಿಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಆದರೆ ಕೌಟುಂಬಿಕವಾಗಿ ಸಂಗಾತಿಯಿಂದ ಸಕಾಲದಲ್ಲಿ ಉತ್ತಮ ಸಲಹೆಗಳನ್ನು ಪಡೆಯುವಿರಿ.

ತುಲಾ: ಅಭಿವೃದ್ಧಿಗೆ ನಾನಾ ರೀತಿಯ ವಿಘ‍್ನಗಳು ತೋರಿಬರಲಿವೆ. ಹಿರಿಯರೊಡನೆ ಅನಗತ್ಯ ವಾದ ವಿವಾದಗಳಿಗೆ ಎಡೆಮಾಡಿಕೊಡದಿರಿ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಕಾರ್ಯನಿಮಿತ್ತ ಕಿರುಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಆದಾಯ ಕಡಿಮೆಯಾಗಿ ಖರ್ಚು ಹೆಚ್ಚಾಗುವುದು. ಇದರಿಂದ ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಾಗದೇ ಚಿಂತೆಯಾಗಬಹುದು. ಮನೆ ಕಟ್ಟುವ ಕೆಲಸ ಆರಂಭಿಸಿದ್ದಲ್ಲಿ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಲಿವೆ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ಅವಿವಾಹಿತರ ವಿವಾಹ ಮಾತುಕತೆಗಳನ್ನು ಅರ್ಧಕ್ಕೇ ನಿಲ್ಲಲಿವೆ. ನೂತನ ವೃತ್ತಿ ಆರಂಭಿಸಲು ಕೆಲವು ದಿನ ಕಾಯುವುದು ಒಳಿತು. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆ ಮನಸ್ಸು ಮಾಡುವರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಬಹುದು.

ಮಕರ: ನಾಲಿಗೆ ಚಪಲದಿಂದಾಗಿ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಮೈಮೇಲೆಳೆದುಕೊಳ್ಳುತ್ತೀರಿ. ಪ್ರೀತಿ ಪಾತ್ರರ ಭೇಟಿಯಾಗಿ ಮನಸ್ಸಿಗೆ ಖುಷಿಯಾಗುವುದು. ಹಿರಿಯರಿಗೆ ತೀರ್ಥಯಾತ್ರೆ ಯೋಗವಿದೆ. ನೂತನ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಕಂಡುಬರಬಹುದು.

ಕುಂಭ: ದೈಹಿಕ ಆರೋಗ್ಯದಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಂತಾಗುವುದು. ಮಕ್ಕಳ ವಿಚಾರದಲ್ಲಿ ಚಿಂತೆಯಾಗಬಹುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಹೆಚ್ಚಿನ ಧನವ್ಯಯವಾಗಲಿದೆ. ಮಹಿಳೆಯರಿಗೆ ಸಂಗಾತಿಯಿಂದ ಕಿರಿ ಕಿರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ವೃತ್ತಿರಂಗದಲ್ಲಿ ವಿನಾಕಾರಣ ಮಾಡದ ತಪ್ಪಿಗೆ ಅಪವಾದ ಕೇಳಿಬಂದೀತು. ಎಚ್ಚರಿಕೆಯಿಂದ ವ್ಯವಹರಿಸಿ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಹುಟ್ಟಿದವರು ಈ ದಿನದಂದು ಮುಖ್ಯವಾದ ಕೆಲಸ ಮಾಡಿದರೆ ಯಶಸ್ಸು ಖಚಿತ