Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 23 ಮೇ 2019 (06:29 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆ ರಿಪೇರಿ ಕೆಲಸ ಮಾಡುವಿರಿ. ಇದರಿಂದಾಗಿ ಕೆಲವು ಖರ್ಚು ವೆಚ್ಚಗಳಾಗಬಹುದು. ಕಾರ್ಯದೊತ್ತಡ ಹೆಚ್ಚಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಆತಂಕ ಕ್ಷಣ ಎದುರಾದರೂ ಕೊನೆಗೆ ಶುಭ ಫಲ.

ವೃಷಭ: ಅಧಿಕಾರಿ ವರ್ಗದವರಿಗೆ ಮಹಿಳೆಯರಿಂದ ಅಪವಾದದ ಭೀತಿಯಿದೆ. ಎಚ್ಚರಿಕೆಯಿಂದ ವರ್ತಿಸಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಆದಾಯದಷ್ಟೇ ಖರ್ಚೂ ಇರಲಿದೆ. ಪಾಲು ಬಂಡವಾಳ ಹೂಡಿಕೆಯಿಂದ ಲಾಭ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿತ ಶತ್ರುಗಳ ಕಾಟವಿರಲಿದೆ. ಮಿತ್ರರ ಸಹಕಾರ ಸಕಾಲಕ್ಕೆ ದೊರೆಯುವುದರಿಂದ ಕಾರ್ಯ ಸುಸ್ರೂತ್ರವಾಗಲಿದೆ. ವಾಹನ ಸವಾರರಿಗೆ ಅಪಘಾತದ ಭಯವಿದೆ. ದಿನದಂತ್ಯಕ್ಕೆ ಶುಭಸುದ್ದಿ.

ಕರ್ಕಟಕ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ಕಂಡುಬರಲಿದೆ. ಇಷ್ಟ ದೇವತಾ ದರ್ಶನದಿಂದ ಕಾರ್ಯಸಿದ್ಧಿ. ನೂತನ ವೃತ್ತಿಯವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನಾನಾ ಮೂಲಗಳಿಂದ ಧನಾಗಮನವಾಗಲಿದೆ.

ಸಿಂಹ: ಅಂದುಕೊಂಡ ಕಾರ್ಯಗಳು ದೈವಾನುಕೂಲದಿಂದ ಸುಗಮವಾಗಿ ನೆರವೇರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ತಾತ್ಕಾಲಿಕ ವೃತ್ತಿಯವರಿಗೆ ಬಡ್ತಿ ಯೋಗ.

 
ಕನ್ಯಾ: ಪ್ರಾಮಾಣಿಕತೆಯಿಂದ ವರ್ತಿಸಿದರೆ ಸಂಭಾವ್ಯ ಅಪವಾದಗಳಿಂದ ದೂರವಿರಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ.

ತುಲಾ: ವಿದ್ಯಾವಂತರಿಗೆ ತಮ್ಮ ಪ್ರತಿಭೆಗೆ ತಕ್ಕ ಉದ್ಯೋಗಾವಕಾಶಗಳು ದೊರೆಯಲಿದೆ. ಸಾಂಸಾರಿಕವಾಗಿ ಬಂಧು ಮಿತ್ರರ ಆಗಮನ ಮನಸ್ಸಿಗೆ ಸಂತಸ ನೀಡಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ವೃಶ್ಚಿಕ: ಹಿರಿಯರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾಗುತ್ತದೆ. ಆದಾಯವಿದ್ದಷ್ಟೇ ಖರ್ಚೂ ತಲೆದೋರುವುದು. ಹಾಗಿದ್ದರೂ ಅಭಿವೃದ್ಧಿಗೆ ಭಂಗವಿರದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಧನು: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ವೈವಾಹಿಕ ಪ್ರಸ್ತಾಪಗಳು ಬರಲಿವೆ. ಪ್ರವಾಸದಿಂದ ಮನಸ್ಸಿಗೆ ನೆಮ್ಮದಿ, ಖುಷಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದುಡುಕು ವರ್ತನೆ ತೋರದಿರಿ.

ಮಕರ: ಮಕ್ಕಳಿಗೆ ಸಮಯೋಚಿತ ಸಲಹೆ ನೀಡಿ ಮೆಚ್ಚುಗೆಗೆ ಪಾತ್ರರಾಗುವಿರಿ. ರಾಜಕೀಯವಾಗಿ ಸ್ಥಾನ ಮಾನ ಹೆಚ್ಚುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೆಚ್ಚುಗೆ ಗಳಿಸುವರು.

ಕುಂಭ: ದೂರ ಸಂಚಾರದಿಂದ ದೇಹಾಯಾಸವಾದರೂ ಕಾರ್ಯಸಾಧನೆಯಾದೀತು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ. ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.

ಮೀನ: ವೃತ್ತಿ ಬದಲಾವಣೆಗೆ ಇದು ಸಕಾಲ. ಆಸ್ತಿ ವ್ಯವಹಾರ ನಡೆಸಿದರೆ ಲಾಭವಾಗಲಿದೆ. ದಾಯಾದಿಗಳೊಂದಿಗೆ ಮನಸ್ತಾಪ ದೂರವಾಗಲಿದೆ. ದೈವಾನುಕೂಲದಿಂದ ಇಂದು ನಿಮಗೆ ಶುಭ ದಿನವಾಗಿರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments