Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 14 ಮೇ 2019 (06:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸ್ವಯಂ ಪ್ರಯತ್ನಬಲದಿಂದ ಮುಂದುವರಿದರೆ ಕಾರ್ಯಗಳಲ್ಲಿ ಯಶಸ್ಸು. ವಿವಾಹ ಪ್ರಯತ್ನಗಳಿಗೆ ಅಡ್ಡಿ ಆತಂಕ ಎದುರಾಗಬಹುದು. ಆರ್ಥಿಕವಾಗಿ ಧನಾಗಮನವಾಗಿ ನೆಮ್ಮದಿ ಮೂಡಲಿದೆ.

ವೃಷಭ: ಮಾನಸಿಕ ಚಿಂತೆಯಿಂದ ಒಂದು ರೀತಿಯ ಉದಾಸೀನ ಭಾವ ಬರಲಿದೆ. ಕಾರ್ಯದಲ್ಲಿ ನಿರುತ್ಸಾಹ ತೋರಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಂಸಾರಿಕವಾಗಿ ಹಿರಿಯರ ಮಾತಿಗೆ ಮನ್ನಣೆ ಕೊಡಬೇಕಾದೀತು.

ಮಿಥುನ: ನಿರುದ್ಯೋಗಿಗಳಿಗೆ ಉದ್ಯೊಗ ಲಾಭವಾಗಲಿದೆ. ನಿಮ್ಮ ಪ್ರಯತ್ನ ಬಲಕ್ಕೆ ತಕ್ಕ ಫಲ ಸಿಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ರಾಜಕೀಯವಾಗಿ ಸ್ಥಾನ ಮಾನ ಉತ್ತಮವಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಕೃಷಿ ಕ್ಷೇತ್ರದವರು ನಷ್ಟ ಅನುಭವಿಸುವರು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದು. ನಿರ್ಧಾರ ಕೈಗೊಳ್ಳುವಾಗ ಒತ್ತಡಕ್ಕೆ ಒಳಗಾಗದಿರಿ.

ಸಿಂಹ: ಕುಟುಂಬ ವರ್ಗದಲ್ಲಿ ಭಿನ್ನಾಭಿಪ್ರಾಯ ತಲೆದೋರಲಿವೆ. ಹೀಗಾಗಿ ಮಾತಿನ ಮೇಲೆ ನಿಗಾ ಅಗತ್ಯ. ವೈವಾಹಿಕ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಎಚ್ಚರಿಕೆ ಅಗತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

 
ಕನ್ಯಾ: ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ, ಮುನ್ನಡೆ ಗಳಿಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ತುಲಾ: ನಿರುದ್ಯೋಗಿಗಳಿಗೆ ಮನಸ್ಸಿಗೆ ಹಿಡಿಸಿದ ಕೆಲಸ ಸಿಕ್ಕದೇ ಇದ್ದರೂ, ಸದ್ಯಕ್ಕೆ ಕೈಗೆ ಬಂದ ಅವಕಾಶವನ್ನು ಬಳಸಿಕೊಳ್ಳುವುದೇ ಒಳ್ಳೆಯದು. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಇದುವೇ ಸೂಕ್ತ ಸಮಯ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಮಾತ್ರ ಯಶಸ್ಸು. ವ್ಯಾಪಾರಿಗಳು ಬಂಡವಾಳ ಹೂಡಿಕೆ ಮಾಡುವಾಗ ಕಾಗದ ಪತ್ರಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನೆರೆಹೊರೆಯವರೊಂದಿಗೆ ನಿಷ್ಠುರ ಮಾಡಿಕೊಳ್ಳಬೇಡಿ.

ಧನು: ನಿಮ್ಮ ಮೂಗಿನ ನೇರಕ್ಕೆ ನಿರ್ಧಾರ ಕೈಗೊಳ್ಳುವುದರಿಂದ ಇತರರ ಅಸಮಾಧಾನಕ್ಕೆ ಕಾರಣರಾಗುವಿರಿ. ದುಡುಕಿನ ಮಾತನಿಂದ ಮನೆ ಹಾಳು ಎಂಬುದನ್ನು ಮರೆಯಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಮಾಡಿ.

ಮಕರ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ. ಭೂಮಿ ಖರೀದಿ, ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಪ್ರಯಾಣ ಮಾಡಬೇಕಾದೀತು.

ಕುಂಭ: ದಾಯಾದಿಗಳೊಂದಿಗೆ ಇದ್ದ ವೈಷಮ್ಯಗಳು ದೂರವಾಗುವುದು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ. ಸಮಾಧಾನದಿಂದ ಸರಿದೂಗಿಸಿಕೊಂಡು ಹೋಗಬೇಕಾಗುವುದು. ದೇವತಾ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ.

ಮೀನ: ದೃಢ ಚಿತ್ತದಿಂದ ನಿರ್ಧಾರ ಕೈಗೊಳ್ಳಬೇಕಾದ ಸಮಯವಿದು. ಹೆಚ್ಚಿನ ಕಾರ್ಯಲಾಭವಾಗಬೇಕಾದರೆ ಕುಲದೇವರ ಪ್ರಾರ್ಥನೆ ಮಾಡಿ ಮುಂದುವರಿಯಿರಿ. ಸಾಲಗಳು ಮರುಪಾವತಿಯಾಗಿ ಆರ್ಥಿಕವಾಗಿ ಚೇತರಿಕೆ ಕಾಣುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

Share this Story:

Follow Webdunia kannada

ಮುಂದಿನ ಸುದ್ದಿ

ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಲು ಶಿವಲಿಂಗಕ್ಕೆ ಇದರಿಂದ ಪೂಜೆ ಮಾಡಿ