Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 16 ಜನವರಿ 2019 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅವಿವಾಹಿತರಿಗೆ ವಿವಾಹಕ್ಕಾಗಿ ಮನಸ್ಸಿಗೆ ಒಪ್ಪಿಗೆಯಾಗುವ ಮದುವೆ ಪ್ರಸ್ತಾಪಗಳು ಬರುವುದು. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಮುನ್ನಡೆ.

ವೃಷಭ: ಮನೆ ಸಂಬಂಧವಾಗಿ ಹಲವು ಹೊಸ ಖರ್ಚುವೆಚ್ಚಗಳು ತಲೆದೋರಿದಾವು. ಆದರೆ ಆರ್ಥಿಕವಾಗಿಯೂ ಅಷ್ಟೇ ಆದಾಯವಿರುತ್ತದೆ. ವಾಸ ಸ್ಥಳ ಬದಲಾವಣೆ ಮಾಡುವಿರಿ.

ಮಿಥುನ: ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ಸಂಗಾತಿಯೊಂದಿಗೆ ಮನಸ್ತಾಪವಾಗುವುದರಿಂದ ಮನೆ ವಾತಾವರಣ ಹಾಳಾಗುವುದು. ಕಾರ್ಯಕ್ಷೇತ್ರದಲ್ಲಿ ಬೇಡದ ವಿಚಾರಗಳು ನಿಮ್ಮನ್ನು ಕಾಡಲಿವೆ. ಎಚ್ಚರಿಕೆಯಿಂದ ಇರುವುದು ಉತ್ತಮ.

ಕರ್ಕಟಕ: ನೀವು ಹೇಳಿದಂತೆ ಮಕ್ಕಳು ಕೇಳುತ್ತಿಲ್ಲ ಎಂದು ಮನಸ್ಸಿಗೆ ಬೇಸರ ಮಾಡಿಕೊಳ್ಳುತ್ತೀರಿ. ಉದ್ಯೋಗದಲ್ಲಿ ಕೊಂಚ ಅಡೆತಡೆ ತೋರಿಬಂದೀತು. ಆದರೆ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಅನಾರೋಗ್ಯ  ಸಮಸ್ಯೆ ಎದುರಾಗುವುದು.

ಸಿಂಹ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಬಯಸಿದ ಉದ್ಯೋಗ ಸಿಗದ ಬೇಸರ ಕಾಡುವುದು. ದೇವತಾ ಆರಾಧನೆ ಮಾಡಿ.

ಕನ್ಯಾ: ಆರ್ಥಿಕವಾಗಿ ಸಮಾಧಾನಕರ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ವ್ಯವಹಾರ ಮಾಡುವವರಿಗೆ ನಷ್ಟ ಸಾಧ್ಯತೆ.  ಅನಿರೀಕ್ಷಿತವಾಗಿ ಅತಿಥಿಗಳ ಆಗಮನ.

ತುಲಾ: ವೃತ್ತಿಯಲ್ಲಿ ಪ್ರಶಂಸೆ ಸಿಗಲಿದೆ. ಸ್ಥಾನ ಮಾನ ಉನ್ನತವಾಗಲಿದೆ. ಮನೆಯಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಕೆಲಸಕ್ಕೆ ಕೈ ಹಾಕಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಆರ್ಥಿಕ ಲಾಭವಾಗಲಿದೆ.

ವೃಶ್ಚಿಕ: ವಾಯು ಪ್ರಕೃತಿ ಶರೀರದವರಾದರೆ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಿಸಬೇಕಾದೀತು. ಸಾಲಗಾರರ ಕಿರಿ ಕಿರಿ ಇರಲಿದೆ. ನಿರೀಕ್ಷಿತ ಲಾಭಾಂಶವಿರದೇ ಮನಸ್ಸಿಗೆ ಬೇಸರ ಮೂಡುವುದು.

ಧನು: ಕುಲದೇವರಿಗೆ ಸಂಬಂಧಿಸಿದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರೆ ಶುಭವಾಗುತ್ತದೆ. ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾದೀತು. ಉದ್ಯಮಿಗಳಿಗೆ ಲಾಭ ಸಿಗಲಿದೆ. ದೂರ ಸಂಚಾರ ಸಾಧ್ಯತೆಯಿದೆ.

ಮಕರ: ಪರಿಶ್ರಮದಿಂದ ಹೊಸ ಕೆಲಸ ಆರಂಭಿಸಿದರೆ ಲಾಭ ಪಡೆಯುತ್ತೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಇಷ್ಟು ದಿನ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ಸುಧಾರಿಸುವುದು. ದಿನದಂತ್ಯಕ್ಕೆ ಮತ್ತಷ್ಟು ಶುಭ ಫಲ ಕಾಣುವಿರಿ.

ಕುಂಭ: ದಾಯಾದಿಗಳೊಂದಿಗಿನ ಕಲಹಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಸಂಗಾತಿ ಜತೆಗೆ ಕೌಟುಂಬಿಕ ವಿಚಾರಕ್ಕೆ ಕಿರಿ ಕಿರಿ ಆಗುವುದು. ಆದರೂ ಧನಲಾಭ ಯೋಗವಿದೆ.

ಮೀನ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ಆದರೆ ಅಷ್ಟೇ ಖರ್ಚೂ ಇರುವುದು. ವೃತ್ತಿಯಲ್ಲಿ ಅಧಿಕಾರಿ ವರ್ಗದವರ ಸಹಕಾರದಿಂದ ಮುನ್ನಡೆ ಸಾಧಿಸುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments