Webdunia - Bharat's app for daily news and videos

Install App

ಯಾವ ದೇವರಿಗೆ ಯಾವ ಎಣ್ಣೆಯಿಂದ ದೀಪ ಬೆಳಗಬೇಕು ಇಲ್ಲಿ ನೋಡಿ

Krishnaveni K
ಗುರುವಾರ, 7 ನವೆಂಬರ್ 2024 (08:40 IST)
ಬೆಂಗಳೂರು: ದೇವರ ದೀಪ ಹಚ್ಚುವಾಗ ಯಾವ ಎಣ್ಣೆ ಬಳಸಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲಗಳಿರುತ್ತವೆ. ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು ಎಂದು ಇಲ್ಲಿ ನೋಡಿ.

ಶನಿ ದೇವರ ಪೂಜೆ ಸಂದರ್ಭದಲ್ಲಿ ದೀಪಕ್ಕೆ ಎಳ್ಳೆಣ್ಣೆ ಹಾಕುವುದು ಕಡ್ಡಾಯ. ಎಳ್ಳೆಣ್ಣೆಯ ದೀಪ ಹಚ್ಚುವುದರಿಂದ ಶನಿ ದೋಷಗಳು ನಿವಾರಣೆಯಾಗುತ್ತವೆ. ಈ ಕಾರಣಕ್ಕೆ ಎಳ್ಳೆಣ್ಣೆಯ ದೀಪ ಹಚ್ಚಬೇಕು. ಇನ್ನು ಆದಿಪರಾಶಕ್ತಿಯ ಪೂಜೆ ಮಾಡುವಾಗ ಬೇವಿನ ಎಣ್ಣೆ ಹಚ್ಚುವುದು ಸೂಕ್ತ.

ಆದಿ ಪೂಜಿತ ಗಣೇಶ ತೆಂಗಿನಕಾಯಿ ಫಲ ವಸ್ತುಗಳ ಪ್ರಿಯ. ಆತನಿಗೆ ಕೊಬ್ಬರಿ ಎಣ್ಣೆ ಹಾಕಿದ ದೀಪ ಬಳಸಿ ಪೂಜೆ ಮಾಡುವುದು ಸೂಕ್ತ. ಗಣೇಶನಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಮನೆಯಲ್ಲಿ ಶಾಂತಿ, ಸಮಾಧಾನವಿರುತ್ತದೆ. ಇನ್ನು, ವಿಷ್ಣು, ಲಕ್ಷ್ಮಿಯ ಪೂಜೆಯಲ್ಲಿ ಶುದ್ಧ ಹಸುವಿನ ತುಪ್ಪ ಬಳಸಿದ ದೀಪ ಹಚ್ಚಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

ಇನ್ನು ಶಿವನ ಅಂಶವಾದ ಭೈರವನ ಪೂಜೆ ಮಾಡುವಾಗ ಪಂಚದೀಪ ತೈಲ ಹಾಕಿದ ದೀಪ ಹಚ್ಚುವುದು ಸೂಕ್ತ. ಇದರಿಂದ ಮನೆಯಲ್ಲಿ ದೈಹಿಕ, ಮಾನಸಿಕ ಅನಾರೋಗ್ಯ, ಅಶಾಂತಿಗಳು ದೂರವಾಗಿ ಸಮೃದ್ಧಿ ನೆಲೆಸುತ್ತದೆ. ಆರೋಗ್ಯ ಸಮಸ್ಯೆ ದೂರ ಮಾಡಲು ಭೈರವನ ಪೂಜೆ ಮಾಡುವುದು ಸೂಕ್ತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಶಿವ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ ತಪ್ಪದೇ ಓದಿ

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments