Publish Date: Thu, 09 Apr 2026 (11:17 IST)
Updated Date: Thu, 09 Apr 2026 (11:19 IST)
ಮಹಾವಿಷ್ಣು ಅತ್ಯಂತ ಶಾಂತ ಸ್ವಭಾವದ ದೇವರು ಎಂದು ನಂಬಲಾಗಿದೆ. ಹಾಗಿದ್ದರೂ ಧರ್ಮವನ್ನು ಮೀರಿದಾಗ ಮಹಾವಿಷ್ಣುವಿನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಜಾತಕದಲ್ಲಿ ಮಹಾವಿಷ್ಣುವಿನ ಶಾಪ, ಅನಾನುಕೂಲವಿದ್ದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ತಿಳಿದುಕೊಳ್ಳಿ.
ಕೆಲಸಕ್ಕೆ ತಕ್ಕ ಫಲ ಸಿಗದು: ನಾವು ಏನೋ ಕೆಲಸವನ್ನು ಕಷ್ಟಪಟ್ಟು ಮಾಡಿರುತ್ತೇವೆ. ಆದರೂ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನಿಸಬಹುದು. ಉದ್ಯೋಗದಲ್ಲಿ ಸ್ಥಿರತೆಯಿಲ್ಲ ಎನಿಸಬಹುದು.
ಬುದ್ಧಿಮತ್ತೆಯ ಮೇಲೆ ಪರಿಣಾಮ: ಮಹಾವಿಷ್ಣು ನಮ್ಮ ಬುದ್ಧಿಗೆ ಅಧಿದೇವರೂ ಹೌದು. ಹೀಗಾಗಿ ನಾವು ಬುದ್ಧಿವಂತಿಕೆಯ ಕೊರತೆ, ವಿವೇಚನೆಯಿಲ್ಲದೇ ನಿರ್ಧಾರ ತೆಗೆದುಕೊಳ್ಳುತ್ತೀರಿ.
ವಿಷ್ಣುವಿರದ ಕಡೆಯೂ ಲಕ್ಷ್ಮೀ ಇರಲ್ಲ: ಪತಿ ಮಹಾವಿಷ್ಣು ನೆಲೆಸದ ಜಾಗದಲ್ಲಿ ಲಕ್ಷ್ಮೀ ದೇವಿಯೂ ಇರಲ್ಲ. ಹೀಗಾಗಿ ಜೀವನದಲ್ಲಿ ನಿಮಗೆ ಹೊಂದಾಣಿಕೆ, ನೆಮ್ಮದಿ, ಐಶ್ವರ್ಯಾಭಿವೃದ್ಧಿಯಾಗದು.
ಗೌರವ ಕಳೆದುಕೊಳ್ಳುತ್ತೀರಿ: ನಿಮ್ಮ ಕುಟುಂಬ, ಸಮಾಜದ ಮುಂದೆ ಗೌರವ, ನಂಬಿಕೆ ಕಳೆದುಕೊಳ್ಳುವಂತಹ ಸನ್ನಿವೇಶಗಳು ಎದುರಾದೀತು.
ಪರಿಹಾರವೇನು?
ಮಹಾವಿಷ್ಣುವಿನ ಕೋಪವಿದ್ದಲ್ಲಿ ಪ್ರತೀ ಏಕಾದಶಿಗಳಂದು ಉಪವಾಸ ವ್ರತ ಕೈಗೊಳ್ಳಿ. ಮಹಾವಿಷ್ಣುವಿನ ಕುರಿತಾದ ಸಹಸ್ರನಾಮವನ್ನು ಪಠಿಸಿ. ಧರ್ಮದ ದಾರಿಯಲ್ಲಿ ನಡೆಯುತ್ತಾ ಆಗಾಗ ಮಹಾವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡುತ್ತಿರಿ.