Webdunia - Bharat's app for daily news and videos

Install App

ಕುಂಕುಮವನ್ನು ಯಾವ ಬೆರಳಿನಲ್ಲಿ ಇಟ್ಟರೆ ಏನು ಫಲ ದೊರೆಯುತ್ತದೆ ಗೊತ್ತಾ…?

Webdunia
ಶನಿವಾರ, 20 ಜನವರಿ 2018 (07:26 IST)
ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ಕ್ಷೇಮ, ಸುಖಕ್ಕಾಗಿ ಕುಂಕುಮ ಇಡುತ್ತಾರೆ. ಭಕ್ತರು ದೇವರಿಗೆ ಪೂಜೆ ಮಾಡುವಾಗ, ದರ್ಶನ ಪಡೆದ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಿರಿಯರು ಆರ್ಶೀರ್ವಾದ ಮಾಡುವಾಗ ಕುಂಕುಮವಿಡುವುದು ವಾಡಿಕೆ. ಹಾಗೆ ಕುಂಕುಮವನ್ನು ಯಾವ ಬೆರಳಲ್ಲಿಇಟ್ಟರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.


ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿಗ್ರಹದ ಸ್ಥಾನವಾದ್ದರಿಂದ ಆ ಬೆರಳಲ್ಲಿ ಕುಂಕುಮವಿಟ್ಟರೆ ಆ ಗ್ರಹ ನಮಗೆ ದೀರ್ಘವಾದ ಆಯಸ್ಸನ್ನು ನೀಡುತ್ತದೆಯಂತೆ. ಉಂಗುರದ ಬೆರಳು ಸೂರ್ಯ ಸ್ಥಾನವಾದ್ದರಿಂದ ಈ ಬೆರಳಲ್ಲಿ ತಿಲಕವನಿಟ್ಟರೆ ಮನಸ್ಸಿಗೆ ನೆಮ್ಮದಿ ಸಿಕ್ಕಿ ಮನಸ್ಸು ಪ್ರಶಾಂತವಾಗಿರುತ್ತದೆಯಂತೆ. ಹಾಗೆ ಹೆಬ್ಬೆರಳಲ್ಲಿ ತಿಲಕವನಿಟ್ಟುಕೊಂಡರೆ ದೈಹಿಕ ದೃಢತೆ, ಧೈರ್ಯ ದೊರೆಯುತ್ತದೆ. ಯಾಕೆಂದರೆ ಈ ಬೆರಳು ಶುಕ್ರನ ಸ್ಥಾನವಾದ್ದರಿಂದ ಆತ ನಮಗೆ ಅಪಾರ ಶಕ್ತಿ ಹಾಗು ಆರೋಗ್ಯವನ್ನು  ನೀಡುತ್ತಾನೆ. ತೋರು ಬೆರಳಲ್ಲಿ ಕುಂಕುಮವನಿಟ್ಟರೆ ಮೋಕ್ಷ ಲಭಿಸುತ್ತದೆಯಂತೆ. ಯಾಕೆಂದರೆ ಅದು ಗುರುವಿನ ಸ್ಥಾನವಾದ್ದರಿಂದ ಸಮಸ್ಯೆಯಿಂದ ಹೊರಗೆ ತರುವುದರ ಜೊತೆಗೆ ನಮಗೆ ಮೋಕ್ಷ ಉಂಟುಮಾಡುತ್ತಾನಂತೆ.


ನಮ್ಮ ದೇಹದಲ್ಲಿ ಒಟ್ಟು 13 ಸ್ಥಳಗಳಲ್ಲಿ ತಿಲಕವನಿಟ್ಟುಕೊಳ್ಳಬಹುದು. ಆದರೆ ಅನೇಕರು ಹಣೆಯ ಮೇಲೆ ಧರಿಸುತ್ತಾರೆ. ಯಾಕೆಂದರೆ ಅದು ಮಂಗಳ ಗ್ರಹದ ಸ್ಥಾನವಾಗಿದ್ದು, ಆತನಿಗೆ ಕೆಂಪು ಅಂದರೆ ಇಷ್ಟವಾದ್ದರಿಂದ ಅಲ್ಲಿ ಇಟ್ಟರೆ ಮಂಗಳಕರವಾಗಿರುತ್ತದೆ ಎಂಬುದು ನಂಬಿಕೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments