ಮಹಾಲಯ ಅಮವಾಸ್ಯೆಯ ಮಹತ್ವವೇನು? ತಿಳಿಬೇಕಾ

Webdunia
ಸೋಮವಾರ, 8 ಅಕ್ಟೋಬರ್ 2018 (14:08 IST)
ಬೆಂಗಳೂರು : ಆಶ್ವೀಜ ಮಾಸದ ಅಮವಾಸ್ಯೆಯನ್ನು ಮಹಾಲಯ ಅಮವಾಸ್ಯೆಯೆಂದು ಆಚರಿಸಲಾಗುತ್ತದೆ. ದಸರಾ ಮೊದಲು ಬರುವ ಅಮವಾಸ್ಯೆಯೇ ಮಹಾಲಯ ಅಮವಾಸ್ಯೆ. ನಾಳೆಯಿಂದ ನವರಾತ್ರಿ ಆರಂಭ.


ಪಿತೃಪಕ್ಷ ಭಾದ್ರಪದ ಮಾಸದ ಪೂರ್ಣಿಮೆಯಂದು ಶುರುವಾಗುತ್ತದೆ. 16 ದಿನಗಳ ಕಾಲ ಇರುತ್ತದೆ. ಆಶ್ವೀಜ ಮಾಸದ ಅಮವಾಸ್ಯೆಯಂದು ಪಿತೃಪಕ್ಷ ಮುಕ್ತಾಯವಾಗುತ್ತದೆ. ಗರುಡ ಪುರಾಣದಲ್ಲಿ ಮಹಾಲಯ ಅಮವಾಸ್ಯೆಗೆ ಬಹಳ ಮಹತ್ವವಿದೆ. ಅದ್ರ ಪ್ರಕಾರ ನಮ್ಮ ಪೂರ್ವಜರು ಈ ದಿನ ಮನೆ ಬಾಗಿಲಿಗೆ ಬರ್ತಾರಂತೆ. ಕುಟುಂಬಸ್ಥರು ತಮ್ಮ ಶ್ರಾದ್ಧ ಮಾಡಿ ಇನ್ನೊಮ್ಮೆ ವಿದಾಯ ಹೇಳಲಿ ಎಂದು ಅವರು ಬಯಸುತ್ತಾರೆ. ಅಕಾಲ ಮೃತ್ಯುವಿಗೆ ತುತ್ತಾದವರ ಶ್ರಾದ್ಧವನ್ನು ಕೂಡ ಇಂದೇ ಮಾಡಲಾಗುತ್ತದೆ.


ಶ್ರಾದ್ಧ ಮಾಡಿದ್ರೆ ಪೂರ್ವಜರು ಖುಷಿಯಾಗ್ತಾರೆ. ಸಂಪತ್ತು, ವಿದ್ಯೆ, ಸುಖವನ್ನು ನೀಡ್ತಾರೆ. ಒಂದು ವೇಳೆ ಈ ದಿನ ಶ್ರಾದ್ಧ ಮಾಡದೆ ಹೋದಲ್ಲಿ ಪೂರ್ವಜರು ಕೋಪಗೊಳ್ತಾರೆ. ಇದ್ರಿಂದ ಮನೆ ಸುಖ-ಶಾಂತಿ ಹಾಳಾಗುತ್ತದೆ ಎಂದು ನಂಬಲಾಗಿದೆ.


ಎಲ್ಲ ಪೂರ್ವಜರು ಸಾವನ್ನಪ್ಪಿದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಆ ದಿನ ಶ್ರಾದ್ಧ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ದಿನ ಎಲ್ಲರ ಹೆಸರಿನಲ್ಲಿ ತರ್ಪಣ ಬಿಡುವುದು ಒಳ್ಳೆಯದು. ಈ ದಿನ ಬ್ರಾಹ್ಮಣರೊಬ್ಬರನ್ನು ಮನೆಗೆ ಕರೆದು ಊಟ ಹಾಕಬೇಕು. ಜೊತೆಗೆ ಒಳ್ಳೆಯದಾಗಲೆಂದು ಆಶೀರ್ವಾದ ಮಾಡುವಂತೆ ಅವರನ್ನು ಪ್ರಾರ್ಥಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments