Webdunia - Bharat's app for daily news and videos

Install App

ಮಹಾವಿಷ್ಣುವಿನ ಪಾದವಿರುವ ಈ ದೇವಾಲಯಕ್ಕೆ ದುಃಖ ನಾಶವಾಗುತ್ತದೆ

Krishnaveni K
ಬುಧವಾರ, 4 ಸೆಪ್ಟಂಬರ್ 2024 (08:39 IST)
ಬೆಂಗಳೂರು: ನಮ್ಮ ಭಾರತ ದೇಶದಲ್ಲಿ ಎಷ್ಟೋ ದೇವಾಲಯಗಳು ಅನೇಕ ವಿಶೇಷತೆಗಳನ್ನು ಹೊಂದಿವೆ. ಮಹಾವಿಷ್ಣುವಿನ ಈ ದೇವಾಲಯದ ವಿಶೇಷತೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಬಿಹಾರದ ಗಯಾದಲ್ಲಿ ಫಾಲ್ಗು ನದಿ ಬಳಿ ಒಂದು ಮಹಾವಿಷ್ಣುವಿನ ದೇವಾಲಯವಿದೆ. ಇಲ್ಲಿನ ವಿಶೇಷವೆಂದರೆ ಈ ದೇವಾಲಯದಲ್ಲಿ ವಿಷ್ಣು ಪಾದವನ್ನು ಪೂಜಿಸಲಾಗುತ್ತದೆ. ಮಹಾವಿಷ್ಣುವಿನ ಪಾದವನ್ನು ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುವುದಲ್ಲದೆ, ಜೀವನದ ದುಃಖಗಳೆಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಗಯಾಸುರ ಎಂಬ ರಾಕ್ಷಸನನ್ನು ಮಹಾವಿಷ್ಣುವು ಇಲ್ಲಿಯೇ ಬಂಡೆಯ ಮೇಲೆ ತುಳಿದು ಸಂಹಾರ ಮಾಡಿದ ಎಂಬ ಪೌರಾಣಿಕ ಹಿನ್ನಲೆ ಈ ಕ್ಷೇತ್ರಕ್ಕಿದೆ. ಹೀಗಾಗಿಯೇ ಅಂದು ಮಹಾವಿಷ್ಣು ಕಾಲಿನಿಂದ ರಾಕ್ಷಸನನ್ನು ತುಳಿದ ಸ್ಥಳವನ್ನೇ ಇಂದು ಮಹಾವಿಷ್ಣುವಿನ ಹೆಜ್ಜೆಗುರುತಾಗಿ ಪೂಜೆ ಮಾಡಲಾಗುತ್ತದೆ.

ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಇಲ್ಲಿನ ಶಿಲೆಯ ಮೇಲಿರುವ ವಿಷ್ಣುವಿನ ಪಾದವನ್ನು ಸ್ಪರ್ಶಿಸುವುದರಿಂದ ನಿಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತದೆ. ಈ ದೇವಾಲಯಕ್ಕೆ ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿ ಸಹಿತ ಭೇಟಿ ಮಾಡಿದ್ದನಂತೆ. ಹೀಗಾಗಿ ಈ ಪುಣ್ಯ ಸ್ಥಳ ವಿಶೇಷವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments