Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (07:26 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು, ಕೆಲಸಗಳನ್ನು ಮಾಡಲು ಇಂದು ನಿಮಗೆ ಪ್ರಶಸ್ತವಾದ ದಿನ,
*ವೃಷಭ ರಾಶಿ: ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು. ದುಂದು ವೆಚ್ಚವನ್ನು ತಪ್ಪಿಸಿ.
*ಮಿಥುನ ರಾಶಿ : ನಿಮ್ಮ ಜ್ಞಾನ ಮತ್ತು ಹಾಸ್ಯ ಪ್ರಜ್ಞೆ ನಿಮ್ಮ ಬಳಿಯಿರುವ ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ.
*ಕಟಕ ರಾಶಿ : ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತಿರಿ.
*ಸಿಂಹ ರಾಶಿ : ಇಂದು ಬೆಳಿಗ್ಗೆ ನಿಮಗೆ ಸಿಗುವ ಒಂದು ವಸ್ತು ನಿಮ್ಮ ಇಡೀ ದಿನವನ್ನು ಅದ್ಭುತವಾಗಿರಿಸುತ್ತದೆ.
*ಕನ್ಯಾ ರಾಶಿ : ಇಂದು ನಿಮ್ಮ ಆಕರ್ಷಣೆ  ಹಾಗೂ ವ್ಯಕ್ತಿತ್ವ  ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.
*ತುಲಾ ರಾಶಿ : ಇಂದು ನೀವು ಯಾವುದೇ ಕಾರಣವಿಲ್ಲದೆ ಕೆಲವು ಜನರೊಂದಿಗೆ ಗೊಂದಲ ಮಾಡಬಹುದು. ಇದು ನಿಮ್ಮ ಮನಸ್ಥಿತಿಯನ್ನು , ಸಮಯವನ್ನು ಹಾಳು ಮಾಡುತ್ತದೆ.
*ವೃಶ್ಚಿಕ ರಾಶಿ : ಇಂದು ನಿಮ್ಮ ಸಭ್ಯ ನಡವಳಿಕೆಯನ್ನು ಕಂಡು ಜನರು ನಿಮ್ಮನ್ನು ಹೊಗಳುತ್ತಾರೆ.
*ಧನು ರಾಶಿ : ಇಂದಿನ ದಿನದ ಆರಂಭ ಚೆನ್ನಾಗಿ ಆಗಿದ್ದರೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು.
*ಮಕರ ರಾಶಿ : ಇಂದು ನಿಮ್ಮ ಆಪ್ತರೊಂದಿಗೆ ಜಗಳವಾಗಬಹುದು ವಿಷಯ ನ್ಯಾಯಾಲಯದ ಕಚೇರಿಯವರೆಗೂ ಹೋಗಬಹುದು.
*ಕುಂಭ ರಾಶಿ : ಇಂದು ಕೆಲವರು ತಮ್ಮ ಮಾತುಗಳಿಂದ ನಿಮ್ಮನ್ನು ಕೋಪಗೊಳಿಸಬಹುದಾದರೂ ನೀವು ಅದನ್ನು ನಿರ್ಲಕ್ಷಿಸಿದರೆ ಉತ್ತಮ.
* ಮೀನ ರಾಶಿ :  ಇಂದ ನಿಮಗೆ ಹೆಚ್ಚು ವಿಶ್ರಾಂತಿ ಸಗುತ್ತದೆ. ಮತ್ತು ಕುಟುಂಬದ ರಹಸ್ಯ ಸುದ್ದಿಯೊಂದು ನಿಮಗೆ ಅಚ್ಚರಿಯನ್ನು ಮೂಡಿಸುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಮನೆ ಕನಸು ನನಸಾಗಲು ಅರಳಿಮರದ ಕೆಳಗೆ ಇದನ್ನು ಹೂತು ಹಾಕಿ