Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯ ಹೀಗಿದೆ
ಬೆಂಗಳೂರು , ಶನಿವಾರ, 8 ಆಗಸ್ಟ್ 2020 (07:36 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಅನಿರೀಕ್ಷಿತ ಬಿಲ್ ಗಳು ಹನಕಾಸಿನ ಹೊರೆಯನ್ನು ಹೆಚ್ಚಿಸುತ್ತವೆ. ನಿಮ್ಮ ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು.
*ವೃಷಭ ರಾಶಿ: ಇಂದು ನೀವು ಹಲವಾರು ಒತ್ತಡಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು.
*ಮಿಥುನ ರಾಶಿ : ಇಂದು ಹಣದ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ. ಆದರೆ ನಿಮ್ಮ ಕೋಪದ ಸ್ವಭಾವದಿಂದ ಇಂದು ಹಣವನ್ನು ಗಳಿಸುವಲ್ಲಿ ಸಾಧ್ಯವಾಗದಿರಬಹುದು.
 *ಕಟಕ ರಾಶಿ : ಇಂದು ತೋಟಗಾರಿಕೆ ನಿಮಗೆ ನೆಮ್ಮದಿಯನನ್ಉ ನೀಡಬಹುದು. ಇಂದು ದುಂದುವೆಚ್ಚವನ್ನು ತಪ್ಪಿಸಿ.
*ಸಿಂಹ ರಾಶಿ :ಇಂದು ನೀವು ಹಣದ ಪ್ರಯೋಜನವನ್ನು ಪಡೆಯಬಹುದು ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.
*ಕನ್ಯಾ ರಾಶಿ : ಇಂದು ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ. ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ ನಿಮ್ಮ ಮನಸ್ಸಿಗೆ ತೊಂದರೆಯಾಗಬಹುದು.
*ತುಲಾ ರಾಶಿ :ನಿಮ್ಮ ಉದ್ವೇಗಗಳನ್ನು ಹತೋಟಿಯಲ್ಲಿರಿಸಿಕೊಳ್ಳಿ. ನಿಮ್ಮ ಸಾಂಪ್ರದಾಯಿಕ ಚಿಂತನೆ ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸಬಹುದು.
*ವೃಶ್ಚಿಕ ರಾಶಿ : ಖಿನ್ನತೆಯನ್ನು ಹೊಡೆದೊಡಿಸಿ ಇದು ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಇಂದು ಕೆಲಸದ ಎಲ್ಲಾ ಕುಂದು ಕೊರತೆಗಳು ಮಾಯವಾಗುತ್ತದೆ.
*ಧನು ರಾಶಿ : ಇಂದು ನಿಮಗೆ ಹಣದ ಅಗತ್ಯವಿದ್ದರೂ ಅದು ನಿಮಗೆ ದೊರೆಯುವುದಿಲ್ಲ. ನಿಮ್ಮ ಸಂಬಂಧಿಯೊಬ್ಬರು ಇಂದು ನಿಮ್ಮ ಮನೆಗೆ ಭೇಟಿ ನೀಡಬಹುದು.
*ಮಕರ ರಾಶಿ : ಹಣವನ್ನು  ದುಂದುವೆಚ್ಚ ಮಾಡುತ್ತಿರುವುದನ್ನು ಇಂದು ನಿಯಂತ್ರಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ಸಮಸ್ಯೆ ಎದುರಾಗಬಹುದು.
*ಕುಂಭ ರಾಶಿ : ಯಾರಾದರೂ ನಿಮ್ಮನ್ನು ಬಲಿಪಶುವನ್ನಾಗಿ ಮಾಡಲು ಪ್ರಯತ್ನಿಸಬಹುದು ಎಚ್ಚರದಿಂದಿರಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ.
* ಮೀನ ರಾಶಿ : ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಒಬ್ಬರು ಇನ್ನೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ  ಮೂಲಕ ವೈಯಕ್ತಿಕಸಮಸ್ಯೆಗಳನ್ನು ಪರಿಹರಿಸಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣ ವಿಗ್ರಹದ ಜೊತೆಗೆ ಇದನ್ನು ಇಟ್ಟರೆ ತುಂಬಾ ಒಳ್ಳೆಯದು