Select Your Language

Notifications

webdunia
webdunia
webdunia
webdunia

ಸೂರ್ಯಾಸ್ತದ ನಂತರ ಪೂಜೆ ಮಾಡುವವರಿಗೆ ಈ ವಿಚಾರ ತಿಳಿದಿರಲಿ

ಸೂರ್ಯಾಸ್ತದ ನಂತರ ಪೂಜೆ ಮಾಡುವವರಿಗೆ ಈ ವಿಚಾರ ತಿಳಿದಿರಲಿ
ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2019 (09:46 IST)
ಬೆಂಗಳೂರು : ಭಗವಂತನ ಧ್ಯಾನವನ್ನು ಯಾವಾಗ ಬೇಕಾದರೂ ಮಾಡಬಹುದು. ಆದರೆ ಪೂಜೆ ಮಾಡುವಾಗ ಮಾತ್ರ ಕೆಲವೊಂದು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಸೂರ್ಯಾಸ್ತದ ನಂತರ ಮಾಡುವ ಪೂಜೆಗೆ ಕೆಲವು ನಿಯಮಗಳಿವೆ.


ಹೌದು. ಸೂರ್ಯಾಸ್ತದ ನಂತರ ಪೂಜೆ ಮಾಡುವವರು ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭ ಫಲಗಳು ಸಿಗುವ ಸಾಧ್ಯತೆ ಹೆಚ್ಚಿದೆ.


ಸೂರ್ಯನ ಮೊದಲ ಕಿರಣ ಭೂಮಿಗೆ ಬಿದ್ದ ತಕ್ಷಣ ದಿನದ ಆರಂಭವಾಗುತ್ತದೆ. ದೇವಾನುದೇವತೆಗಳ ಪೂಜೆಯ ಜೊತೆಗೆ ಸೂರ್ಯ ದೇವನ ಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಆದ್ರೆ ರಾತ್ರಿ ಸೂರ್ಯ ದೇವನಿಗೆ ಪೂಜೆ ಮಾಡಬಾರದು.


ಸೂರ್ಯಾಸ್ತದ ನಂತ್ರ ದರ್ಬೆ ಹಾಗೂ ತುಳಸಿ ಎಲೆಗಳನ್ನು ಕೀಳಬಾರದು. ರಾತ್ರಿ ಪೂಜೆ ಮಾಡಿದ ನಂತ್ರ ಉಳಿಯುವ ಹೂ, ಅಕ್ಕಿ, ಪೂಜಾ ಸಾಮಗ್ರಿಗಳನ್ನು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದ ತಕ್ಷಣ ಶುದ್ಧವಾಗಿ ನಂತ್ರ ಅವುಗಳನ್ನು ಸ್ವಚ್ಛಗೊಳಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಗುರು ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?