Select Your Language

Notifications

webdunia
webdunia
webdunia
webdunia

ಮನೆಯ ಸುತ್ತಮುತ್ತಲಿರುವ ಈ ವಸ್ತು ದಾರಿದ್ರ್ಯಕ್ಕೆ ಕಾರಣವಾಗಬಹುದು ಎಚ್ಚರ

ಮನೆಯ ಸುತ್ತಮುತ್ತಲಿರುವ ಈ ವಸ್ತು ದಾರಿದ್ರ್ಯಕ್ಕೆ ಕಾರಣವಾಗಬಹುದು ಎಚ್ಚರ
ಬೆಂಗಳೂರು , ಸೋಮವಾರ, 22 ಜುಲೈ 2019 (06:29 IST)
ಬೆಂಗಳೂರು : ಮನೆಯನ್ನು ಒಳಗಡೆ ಮಾತ್ರ ಶುಚಿಯಾಗಿಟ್ಟುಕೊಂಡರೆ ಸಾಲದು. ಮನೆಯ ಸುತ್ತಮುತ್ತ ಏನಾಗಿದೆ ಎಂದು ಗಮನಿಸುತ್ತ ಇರಬೇಕು. ಇಲ್ಲವಾದರೆ ಮನೆಯ ಆಸುಪಾಸು ಈ ವಸ್ತುಗಳಿದ್ದರೆ ಆ ಮನೆಗೆ ದರಿದ್ರ ಆವರಿಸುವುದು ಖಂಡಿತ.




* ನಿಮ್ಮ ಮನೆಯ ಅಂಗಡಿ ಅಥವಾ ಆಸು ಪಾಸಿನಲ್ಲಿ ಪಾರಿವಾಳದ ಗೂಡುಗಳಿದ್ದರೆ ಅದನ್ನು ತೆಗೆದು ಹಾಕಿ. ಯಾಕೆಂದರೆ ಇದು ಬಡತನಕ್ಕೆ ಕಾರಣವಾಗುತ್ತದೆ.


* ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇಲ್ಲವಾದರೆ ಅಂತಹ ಮನೆಯಲ್ಲಿ ವಾಸಿಸುವ ಮನಸ್ಸುಗಳಲ್ಲಿ ಸಹ ಬಿರುಕನ್ನು ಮೂಡಿಸುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.

* ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದನ್ನು ಕಂಡ ತಕ್ಷಣ ತೆಗೆದು ಹಾಕಿ.ಇಲ್ಲವಾದರೆ ಹಣಕಾಸಿನ ಸಮಸ್ಯೆ ನಿಮಗೆ ಎದುರಾಗುತ್ತದೆ.

* ಮನೆಯ ಮುಂದಿರುವ ಗಿಡ ಮತ್ತು ಮರಗಳಿಂದ ಒಣಗಿದ ಎಲೆಗಳು ಸಾಮಾನ್ಯವಾಗಿ ಬೀಳುತ್ತಿರುತ್ತವೆ. ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿ. ಇದು ಕೂಡ ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗಬಹುದು.

ಮನೆ ಅಥವಾ ಅಂಗಡಿ ಬಳಿ ಜೇನು ಗೂಡು ಕಟ್ಟಿದರೆ ಅದು ಅಶುಭ  ಎಂದು ಪರಿಗಣಿಸಲಾಗಿದೆ . ಹಣ ವಿಪರೀತವಾಗಿ ಖರ್ಚಾಗುವ ಲಕ್ಷಣವನ್ನು ಇದು ಸೂಚಿಸುತ್ತದೆ .

 
 

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆ ವೇಳೆ ದೇವರ ಪೂಜೆ ಮಾಡುವಾಗ ಈ ವಿಚಾರ ತಿಳಿದಿರಿ