Select Your Language

Notifications

webdunia
webdunia
webdunia
webdunia

ಕಷ್ಟಗಳು ಕಳೆಯಲು ಆಗಸ್ಟ್ 1 ರ ಅಮಾವಾಸ್ಯೆಯಂದು ದೇವರಿಗೆ ಈ ಹೂವನ್ನು ಅರ್ಪಿಸಿ ಸಂಕಲ್ಪ ಮಾಡಿ

ಕಷ್ಟಗಳು ಕಳೆಯಲು ಆಗಸ್ಟ್ 1 ರ ಅಮಾವಾಸ್ಯೆಯಂದು ದೇವರಿಗೆ ಈ ಹೂವನ್ನು ಅರ್ಪಿಸಿ ಸಂಕಲ್ಪ ಮಾಡಿ
ಬೆಂಗಳೂರು , ಬುಧವಾರ, 31 ಜುಲೈ 2019 (09:01 IST)
ಬೆಂಗಳೂರು : ಜೀವನದಲ್ಲಿ ಯಾವಾಗಲೂ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅದರಲ್ಲೂ ಹೆಚ್ಚಾಗಿ ಹಣದ ಸಮಸ್ಯೆ, ಸಾಲದ ಸಮಸ್ಯೆಗೆ  ಒಳಗಾಗುವವರೇ ಹೆಚ್ಚು. ಈ ಸಮಸ್ಯೆಯನ್ನು ಪರಿಹಾರ ಮಾಡಲು ಆಗಸ್ಟ್ 1 ರ ಅಮವಾಸ್ಯೆಯಂದು ದೇವರಿಗೆ ಈ ಹೂವನಿಟ್ಟು ಸಂಕಲ್ಪ ಮಾಡಿದರೆ ನಿಮ್ಮ ಹಣಕಾಸಿನ ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದು ದೂರವಾಗುತ್ತದೆ.




ಗುರುವಾರದಂದು  ಸಾಮಾನ್ಯವಾಗಿ ಎಲ್ಲರೂ ಗುರು ರಾಘವೇಂದ್ರ ಸ್ವಾಮಿಯನ್ನು ಹಾಗೂ ಸಾಯಿಬಾಬ ಸ್ವಾಮಿಯನ್ನು ಪೂಜಿಸುತ್ತಾರೆ. ಆದರೆ ಆಗಸ್ಟ್ 1 ರ ಅಮವಾಸ್ಯೆ ದಿನದಂದು ನೀವು ಶ್ರೀ ವೆಂಕಟೇಶ್ವರ ಸ್ವಾಮಿಯ ಸಂಕಲ್ಪ ಮಾಡಬೇಕು. ದೇವರಿಗೆ ಬಂಗಾರದ ಹೂ ಅಂದರೆ ಬಂಗಾರದ ಬಣ್ಣವಿರುವಂತಹ ಸೇವಂತಿಗೆ ಹೂವನ್ನು ಅರ್ಪಿಸಬೇಕು.


ಪಾಯಸವನ್ನು ನೈವೇದ್ಯಕ್ಕೆ ಇಟ್ಟು ಜೀವನದಲ್ಲಿ ಇರುವ ಕಷ್ಟಗಳನ್ನು, ಹಣದ ಸಮಸ್ಯೆಗಳಿಂದ ನಮ್ಮನ್ನ ಕಾಪಾಡು ಎಂದು ಸಂಕಲ್ಪ ಮಾಡಿ. ಇದರಿಂದ ಜೀವನದಲ್ಲಿ ಸುಧಾರಣೆ ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಾಗಬೇಕಾದರೆ ಸೋಮವಾರ ಈ ಪೂಜೆ ಮಾಡಬೇಕು