Webdunia - Bharat's app for daily news and videos

Install App

ಮಹಾವಿಷ್ಣುವಿನ ಈ ಮಂತ್ರ ಹೇಳಿದರೆ ಬುದ್ಧಿ ಚುರುಕಾಗುತ್ತದೆ

Krishnaveni K
ಶನಿವಾರ, 27 ಜುಲೈ 2024 (08:36 IST)
ಬೆಂಗಳೂರು: ಮಹಾವಿಷ್ಣು ನಮ್ಮ ಜೀವನದಲ್ಲಿ ಯಶಸ್ಸು, ನೆಮ್ಮದಿಗೆ ಕಾರಣನಾಗುವನು. ಅದೂ ಆಷಾಢ ಮಾಸದಲ್ಲಿ ಮಹಾವಿಷ್ಣುವಿನ ಆರಾಧನೆ ಮಾಡುವುದು ವಿಶೇಷವಾಗಿದೆ. ಅದರಲ್ಲೂ ವಿಶೇಷವಾಗಿ ಈ ಒಂದು ಮಂತ್ರ ಹೇಳುವುದರಿಂದ ಬುದ್ಧಿ ಚುರುಕಾಗುತ್ತದೆ.

ಮಹಾವಿಷ್ಣು ಅಲಂಕಾರ ಪ್ರಿಯ. ಅದೇ ರೀತಿ ಸುಶ್ರಾವ್ಯವಾಗಿ ಹಾಡಿದರೂ ಪ್ರಸನನ್ನಾಗುತ್ತಾನೆ. ಪ್ರತಿನಿತ್ಯ ವಿಷ್ಣು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಮನಸ್ಸಿನಲ್ಲಿರುವ ಭಯ ದೂರವಾಗುತ್ತದೆ. ವಿಷ್ಣು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಬುದ್ಧಿ ಚುರುಕಾಗುತ್ತದೆ.

ಹೀಗಾಗಿ ಈ ಮಂತ್ರವನ್ನು ಮಕ್ಕಳಿಗೂ ಹೇಳಿಕೊಡಿ. ಇದರಿಂದ ಅವರ ಬುದ್ಧಿ ಚುರುಕಾಗಿ ಯಶಸ್ಸು ಪಡೆಯುವರು. ವಿಷ್ಣು ಗಾಯತ್ರಿ ಮಂತ್ರ ಹೀಗಿದೆ ನೋಡಿ:

ಸಶಂಖ ಚಕ್ರಂ ಸ ಕಿರೀಟ ಕುಂಡಲಂ
ಸಪೀತ ವಸ್ತ್ರಂ ಸರಸೀರು ಹೇಕ್ಷಣಂ
ಸಹಾರ ವಕ್ಷಸ್ಥಳ ಕೌಸ್ತುಭ ಶ್ರಿಯಾಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ
 

ಇದು ವಿಷ್ಣುವಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರವನ್ನು ಎಲ್ಲಾ ವಯಸ್ಸಿನವರೂ ಪ್ರತಿನಿತ್ಯ ಪಠಿಸಬೇಕು. ಇದನ್ನು ಪಠಿಸುವುದರಿಂದ ಅಂತಹ ವ್ಯಕ್ತಿಗಳ ಏಕಾಗ್ರತೆ ಹೆಚ್ಚಬಹುದು. ಬುದ್ಧಿ ಚುರುಕಾಗುವುದು ಮತ್ತು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಮುಂಭಾಗದಲ್ಲಿ ಈ ಕೆಲವು ಗಿಡಗಳಿದ್ದರೆ ದರಿದ್ರ ತಪ್ಪಿದ್ದಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಚಂದ್ರಘಂಟಾ ಮಂತ್ರ ಓದುವುದರಿಂದ ನಿಮಗೆ ಈ ಫಲಗಳು ಸಿಗುತ್ತವೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments