Webdunia - Bharat's app for daily news and videos

Install App

ವಾರದಲ್ಲಿ ಯಾವ ದೇವರನ್ನು ಪೂಜಿಸಿದರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ ಗೊತ್ತಾ?

Webdunia
ಸೋಮವಾರ, 1 ಜುಲೈ 2019 (09:07 IST)
ಬೆಂಗಳೂರು : ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲಾಗಿರುತ್ತದೆ. ಆ ದಿನ ಆಯಾ ದೇವರನ್ನು ಪೂಜಿಸಿದರೆ.ಆ ದೇವರ ಅನುಗ್ರಹ ಖಂಡಿತವಾಗಿಯೂ ಸಿಗುತ್ತದೆ .




*ಭಾನುವಾರ ಸೂರ್ಯ ದೇವನಿಗೆ ಮೀಸಲು. ಭಾನುವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ನಮಸ್ಕಾರವನ್ನು ಮಾಡಿ, ನೈವೇದ್ಯವಾಗಿ ಪಾಯಸ ಇಟ್ಟು  ಸೂರ್ಯ ದೇವನಿಗೆ ಸಮರ್ಪಿಸಬೇಕು. ಇದರಿಂದ  ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳಬಹುದು.


*ಸೋಮವಾರ ಶಿವಿನಿಗೆ ಪ್ರಿಯವಾದ ದಿನ. ಆ ದಿನ ಮಹಾಶಿವನಿಗೆ ಅಕ್ಕಿ ಬೆಲ್ಲ,ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.


* ಮಂಗಳವಾರದ ದಿನ ಆಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು.ಆ ದಿನ ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಎರಡು ನಿಂಬೆಹಣ್ಣಿನ ಸಿಪ್ಪೆಯಿಂದ ದೀಪಾರಾಧನೆ (ನಿಂಬೆಹಣ್ಣಿನ ದೀಪ)  ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ.


* ಬುಧುವಾರದ ದಿನ ಶ್ರೀ ಕೃಷ್ಣನಿಗೆ ತುಂಬಾ ಪ್ರೀತಿಕರವಾದ ದಿನ ತುಳಸಿ ಎಲೆಗಳಿಂದ ಶ್ರೀ ಕೃಷ್ಣನನ್ನು ಪೂಜಿಸಿದರೆ ಅಂದು ದಿಗ್ವಿಜಯ ಆಗುತ್ತದೆ.


* ಗುರುವಾರದ ದಿನ ರಾಘವೇಂದ್ರ ಸ್ವಾಮಿ, ಸಾಯಿಬಾಬಾ ,ದತ್ತಾತ್ರೇಯ ಸ್ವಾಮಿಯನ್ನು ಪೂಜೆ ಮಾಡಿದರೆ ಶೀಘ್ರದಲ್ಲಿ ಅನುಗ್ರಹ ಸಿಗುತ್ತದೆ.


* ಶುಕ್ರವಾರ ಅಂದರೆ ಮಹಾಲಕ್ಷ್ಮೀಗೆ  ತುಂಬಿ ಪ್ರೀತಿಕರವಾದ ದಿನ.ಆದ್ದರಿಂದ ಆ ದಿನ ಕೆಂಪು,ಹಸಿರು,ಬಣ್ಣದ ವಸ್ತ್ರವನ್ನು ಧರಿಸಿ ದೀಪಾರಾಧನೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ.


* ಶನಿವಾರದ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜೆ ಮಾಡಿದರೆ ಸಂಕಷ್ಟದಿಂದ ನಾವು ದೂರಾಗಬಹುದು. ಹಾಗೆಯೇ ಆ ದಿನ 8 ಬಾದಾಮಿ ಹಣ್ಣು,ಉದ್ದಿನ ಬೇಳೆ, ಕಪ್ಪು ಎಳ್ಳನ್ನು ದಾನ ಮಾಡಿದರೆ ಶನೈಶ್ಚರ ಸ್ವಾಮಿಯ ಕೃಪೆಯನ್ನು ಪಡೆಯಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments