Select Your Language

Notifications

webdunia
webdunia
webdunia
webdunia

ಧನಿಯಾ ಬೀಜದಿಂದ ಕಷ್ಟಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?

ಧನಿಯಾ ಬೀಜದಿಂದ ಕಷ್ಟಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (09:05 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕೆಲವರು ಕಷ್ಟಗಳನ್ನು ಎದುರಿಸಿ ನಿಲ್ಲುತ್ತಾರೆ. ಆದರೆ ಕೆಲವರು ಅದಕ್ಕೆ ಪರಿಹಾರ ಕಾಣದೆ ಕಂಗಲಾಗುತ್ತಾರೆ. ಅಂತವರು ಶನಿವಾರದಂದು ಯಾರಿಗೂ  ಹೇಳದೆ ಈ ಪರಿಹಾರವನ್ನು ಮಾಡಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗಿ ಕಷ್ಟತೀರಿಹೋಗುತ್ತದೆ.




ಶನಿವಾರ ಸ್ನಾನ ಮಾಡಿ ಒಂದು ಹಿಡಿ ದನಿಯಾ ಬೀಜವನ್ನು ತೆಗೆದುಕೊಂಡು, ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದನ್ನು ದೇವರ ಮನೆಯಲ್ಲಿಡಬೇಕು. ಇಷ್ಟ ದೇವರಲ್ಲಿ ಕಷ್ಟದೂರವಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು. ಬಳಿಕ ದೇವರಿಗೆ ಬೆಲ್ಲದ ಪೊಂಗಲ್ ನ್ನು ನೈವೇದ್ಯವಾಗಿ ನೀಡಿ ಬಳಿಕ ಕುಟುಂಬದವರಿಗೆ ಆ ಪ್ರಸಾದವನ್ನು ಹಂಚಬೇಕು.


ಬಳಿಕ ದನಿಯಾವನ್ನು ಪುಡಿಮಾಡಿ ಪ್ರತಿ ಶನಿವಾರದಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಈ ದನಿಯಾ ಪುಡಿ ಮತ್ತು ಬೆಲ್ಲ ವನ್ನು ಹಾಕಿ ಅರಳಿ ಮರಕ್ಕೆ ಅರ್ಪಿಸಬೇಕು. 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ