Webdunia - Bharat's app for daily news and videos

Install App

ದೀಪಾರಾಧನೆ ಈ ರೀತಿ ಮಾಡಿದರೆ ಅಂದುಕೊಂಡ ಕೋರಿಕೆಗಳು ನೆರವೇರುತ್ತವೆಯಂತೆ

Webdunia
ಶನಿವಾರ, 10 ಆಗಸ್ಟ್ 2019 (08:34 IST)
ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತಾರೆ. ಆದರೆ ದೀಪಾರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ಇದರಿಂದ ದೇವರ ಅನುಗ್ರಹ ನಮಗೆ ಸಿಗುತ್ತದೆ.




ಪ್ರಾತಃಕಾಲದ ನಾಲ್ಕು ಗಂಟೆ ಮೂವತ್ತು ನಿಮಿಷಗಳಿಂದ ಹಿಡಿದು  ಆರು ಗಂಟೆಯ ಮಧ್ಯದಲ್ಲಿ ಅಂದರೆ ಮುಂಜಾನೆ ನಾಲ್ಕೂವರೆಯಿಂದ ಆರು ಗಂಟೆಯ ಒಳಗೆ ದೀಪಾರಾಧನೆಯನ್ನು ಮನೆಯಲ್ಲಿ ಮಾಡಬೇಕು. ದೀಪದಲ್ಲಿ ಮೊದಲಿಗೆ ಎರಡು ಬತ್ತಿಗಳನ್ನು ಹಾಕಬೇಕು. ಎರಡು ಬತ್ತಿಗಳು ಬಿಡಿಬಿಡಿಯಾಗಿರಬೇಕು. ಆ ಎರಡು ಬತ್ತಿಗಳು ಕೊನೆಯಲ್ಲಿ ಮಾತ್ರ ಸೇರಿರಬೇಕು. ಕೊನೆಗಳು ಸೇರುವಂತೆ ತೈಲದಿಂದ ಸುತ್ತಬೇಕು. ನಂತರವೇ ದೀಪವನ್ನು ಬೆಳಗಿಸಬೇಕು.


ಸಾಯಂಕಾಲ ದೀಪವನ್ನು ದೇವರ ಮುಮದೆ ಬೆಳಗುವ ಮೊದಲು ಹೊಸ್ತಿಲಿನ ಕೊನೆಯ ಮೂಲೆಯಲ್ಲಿ ಇರುವ ಎರಡು ಮೂಲೆಗಳಲ್ಲಿ ಬೆಳಗಿಸುವ ದೀಪವನ್ನು ಇಡಬೇಕು. ದೀಪಾರಾಧನೆಯನ್ನು ಗಣಪತಿಯ ಪ್ರಾರ್ಥನೆಯಿಂದ ಶುರು ಮಾಡಿ ಆರಾಧಿಸಬೇಕು. ಪ್ರಧಾನ ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು. ಎಳ್ಳೆಣ್ಣೆಯಿಂದ ಬೆಳಗಿಸಿದ ದೀಪವನ್ನು ದೇವರಿಗೆ ಎಡ ಭಾಗದಲ್ಲಿ ಹಾಗೂ ಹಸುವಿನ ತುಪ್ಪದಿಂದ ಬೆಳಗಿಸಿದ ದೀಪವನ್ನು ದೇವರ ಬಲ ಭಾಗದಲ್ಲಿ ಇರುವಂತೆ ಬೆಳಗಿಸಬೇಕು.


ದೀಪಾರಾಧನೆಗಾಗಿ ಬೆಳಗಿಸುವ ಬತ್ತಿ ಆಗ್ನೇಯ ದಿಕ್ಕಿಗೆ ಮುಖವಾಗಿ ಇರಿಸಿದರೆ ಅತ್ಯಂತ ಶುಭ. ಪ್ರತಿದಿನ ಈ ನಿಯಮಗಳನ್ನು ಪಾಲಿಸಿದರೆ ಶ್ರೀ ಮಹಾಲಕ್ಷ್ಮೀ ದೇವಿಯ ಅನುಗ್ರಹ ಪಡೆದು, ಅಧಿಕ ಧನ ಪ್ರಾಪ್ತಿಯಾಗಿ ಎಲ್ಲವೂ ಶುಭವಾಗುತ್ತದೆ . ಅಂದುಕೊಂಡ ಕೋರಿಕೆಗಳು ನೆರವೇರುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments