Select Your Language

Notifications

webdunia
webdunia
webdunia
webdunia

ಲಕ್ಷ್ಮೀ ನಾರಾಯಣನ ಅನುಗ್ರಹ ಪಡೆಯಲು ಸೋಮವಾರದಂದು ಹೀಗೆ ಮಾಡಿ

ಲಕ್ಷ್ಮೀ ನಾರಾಯಣನ ಅನುಗ್ರಹ ಪಡೆಯಲು ಸೋಮವಾರದಂದು ಹೀಗೆ ಮಾಡಿ
ಬೆಂಗಳೂರು , ಶನಿವಾರ, 8 ಜೂನ್ 2019 (07:37 IST)
ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಗೆ ಬದುಕಲು ಗಾಳಿ, ನೀರು, ಆಹಾರದಂತೆ ಹಣ ಕೂಡ ಮುಖ್ಯವಾಗುತ್ತದೆ. ಆದ್ದರಿಂದ ಹಣ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಈ ಹಣವನ್ನು ಗಳಿಸಲು ಜನರು ತುಂಬಾ ಕಷ್ಟ ಪಡುತ್ತಾರೆ. ಅದಕ್ಕಾಗಿ ದೇವರ ಮೋರೆ ಹೋಗುತ್ತಾರೆ. ಸೋಮವಾರದಂದು ಈ ಒಂದು ಸಣ್ಣ ಪರಿಹಾರವನ್ನು ಮಾಡಿದರೆ ನಿಮಗೆ ಎಂದೂ ಹಣದ ಸಮಸ್ಯೆ ಎದುರಾಗುವುದಿಲ್ಲ.



ಚಂದನ(ಶ್ರೀಗಂಧ) ಎಂಬುದು ದೈವತ್ವವನ್ನು ಹೊಂದಿದ್ದ ಗಿಡಮೂಲಿಕೆ. ಇದು ನಮ್ಮಲ್ಲಿ ಸಕರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇದು ಭಗವಂತನಿಗು ಕೂಡ ಪ್ರಿಯವಾದ ವಸ್ತು. ಸೋಮವಾರದಂದು ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡುವ ನೀರಿಗೆ ಚಂದನ ಹಾಕಿ ಸ್ನಾನ ಮಾಡಿ, ನಂತರ ದೇವರ ಮನೆಯನ್ನು ಸ್ವಚ್ಚ ಮಾಡಿ ಲಕ್ಷ್ಮೀ ನಾರಾಯಣನ ಫೋಟೋಕ್ಕೆ ಚಂದನ ಹಚ್ಚಿ ನಂತರ ತುಳಸಿ ಪತ್ರೆಯನ್ನು ಅರ್ಪಿಸಬೇಕು, ಬಳಿಕ ದೀಪಾರಾಧನೆ ಮಾಡಿ ಬೆಲ್ಲವನ್ನು ನೈವೇದ್ಯ ಮಾಡಿ.

 

ಬಳಿಕ ತುಳಸಿ ಪತ್ರೆಯನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು. ಬೆಲ್ಲವನ್ನು ಎಲ್ಲರಿಗೂ ಹಂಚಬೇಕು. ಹೀಗೆ ಮಾಡಿದರೆ ಕ್ರಮೇಣ  ಲಕ್ಷ್ಮೀ ನಾರಾಯಣನ ಅನುಗ್ರಹ ನಿಮಗೆ ದೊರೆತು ಹಣದ ಸಮಸ್ಯೆ ದೂರವಾಗುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?