Select Your Language

Notifications

webdunia
webdunia
webdunia
webdunia

ಪದೇ ಪದೇ ಭಯ ಹುಟ್ಟಿಸುವ ಸ್ವಪ್ನ ಬೀಳುತ್ತಿದ್ದರೆ ಚಿಂತೆ ಮಾಡಬೇಡಿ. ಯಾಕೆ ಗೊತ್ತಾ?

ಪದೇ ಪದೇ ಭಯ ಹುಟ್ಟಿಸುವ ಸ್ವಪ್ನ ಬೀಳುತ್ತಿದ್ದರೆ ಚಿಂತೆ ಮಾಡಬೇಡಿ. ಯಾಕೆ ಗೊತ್ತಾ?
ಬೆಂಗಳೂರು , ಸೋಮವಾರ, 16 ಜುಲೈ 2018 (08:59 IST)
ಬೆಂಗಳೂರು : ದೇವರ ಕೃಪೆ ಯಾರ ಮೇಲೆ ಇರುತ್ತದೆಯೋ ಅವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ದೇವರು ಕೆಲವರ ಮೇಲೆ ಮಾತ್ರ ಕೃಪೆ ತೋರುತ್ತಾನೆ. ನಿಮ್ಮ ಮೇಲೆ ದೇವರ ಕೃಪೆ ಇದೆಯೇ ಎಂಬುದನ್ನು ಈ ಲಕ್ಷಣಗಳಿಂದ ತಿಳಿದುಕೊಳ್ಳಬಹುದು.


ಪದೇ ಪದೇ ವಿಚಿತ್ರವಾದ, ಭಯ ಹುಟ್ಟಿಸುವ ಸ್ವಪ್ನ ಬೀಳುತ್ತಿದ್ದರೆ. ಕೆಲವೊಂದು ಸಿನಿಮಾದಂತೆ ಅಥವಾ ಘಟನೆಯಂತ ಸ್ವಪ್ನ ಬಿದ್ದಲ್ಲಿ ಅದು ನಿಜವಾದ್ರೆ ಭಯಪಡಬೇಕಾಗಿಲ್ಲ. ಸ್ವಪ್ನ ಬಿದ್ದ ನಂತ್ರ ತಕ್ಷಣ ಎಚ್ಚರವಾದಾಗ ಬೆವರು ಬಂದ್ರೆ, ಇಲ್ಲ ಕಣ್ಣಲ್ಲಿ ನೀರು ಬಂದ್ರೆ ಇದು ವಿಶೇಷ ದೈವ ಕೃಪೆ ನಿಮ್ಮ ಮೇಲಿದೆ ಎಂದರ್ಥ.


ಕೆಲವೊಂದು ಕೆಲಸಗಳನ್ನು ಮಾಡುವ ಮುನ್ನ ಎಲ್ಲ ತಯಾರಿಯಾದ್ರೂ ಕೊನೆ ಕ್ಷಣದಲ್ಲಿ ಅಂತರಂಗ ಹಿಂದೇಟು ಹಾಕುತ್ತದೆ. ಯಾವುದೇ ಪೂರ್ವಾಪರ ಗೊತ್ತಿಲ್ಲದೆ ಧೈರ್ಯ ಮಾಡಿ ಅಂತರಂಗದ ಮಾತು ಕೇಳಿದಾಗ ನೀವಿಟ್ಟ ಹೆಜ್ಜೆ ಸರಿಯಾಗಿರುತ್ತದೆ. ಪದೇ ಪದೇ ಹೀಗಾದಲ್ಲಿ ನಿಮ್ಮ ಅಂತರ್ದೃಷ್ಟಿ ಜಾಗೃತವಾಗಿದೆ ಎಂದರ್ಥ. ಜೊತೆಗೆ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದರ್ಥ.
ಎಂಥ ಕಷ್ಟದ ಪರಿಸ್ಥಿತಿಯಲ್ಲೂ ನಿಮ್ಮ ಮನಸ್ಸು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಲ್ಲಿದ್ದರೆ ಹಾಗೂ ನಿರೀಕ್ಷೆಯಂತೆ ಒಳ್ಳೆಯದಾದಲ್ಲಿ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದೇ ಅರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಯಾಕೆ ಗೊತ್ತಾ?